ಮಾರುಕಟ್ಟೆಗೆ ಬಂತು ಸೆಗಣಿ ಸೋಪ್, ಬಿದಿರಿನ ಬಾಟಲ್!
ಮಾರುಕಟ್ಟೆಗೆ ಬಂತು ಸೆಗಣಿ ಸೋಪ್, ಬಿದಿರಿನ ಬಾಟಲ್| ಬಿಡುಗಡೆಗೊಳಿಸಿದ ಸಚಿವ ಗಡ್ಕರಿ
ನವದೆಹಲಿ[ಅ.02]: ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದನದ ಸಗಣಿಯಿಂದ ತಯಾರಿಸಿದ ಸೋಪು ಹಾಗೂ ಬಿದಿರಿನಿಂದ ತಯಾರಿಸಲಾದ ನೀರಿನ ಬಾಟಲ್ಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.
ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಮೂಲಕ ಈ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಸಚಿವ ಗಡ್ಕರಿ ಇವುಗಳನ್ನು ಬಿಡುಗಡೆ ಮಾಡಿದರು.
ಬಿದಿರಿನ ನೀರಿನ ಬಾಟಲ್ ದರ 560 ರು. ಹಾಗೂ 125 ಗ್ರಾಂನ ಸೋಪಿನ ಬೆಲೆ 125 ರು.ಗೆ ನಿಗದಿ ಮಾಡಲಾಗಿದೆ.