ಮೀ ಟೂ ಬಗ್ಗೆ ಮಾತಾಡಿದ್ರು ಉಮಾಶ್ರೀ
ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅಚವರು ಇದೀಗ ಮೀ ಟೂ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೀ ಟೂ ಎನ್ನುವುದು ಉತ್ತಮವಾದುದೇ ಆಗಿದ್ದು, ಆದರೆ ಇದರ ದುರುಪಯೋಗ ಆಗಬಾರದು ಎಂದು ಹೇಳಿದ್ದಾರೆ.
ಬಳ್ಳಾರಿ: ಮಹಿಳೆಯರು ತಮಗಾದ ಕಿರುಕುಳದ ಅನುಭವ ಅಭಿವ್ಯಕ್ತಗೊಳಿಸುವ ಉದ್ದೇಶದಿಂದ ಶುರುವಾದ ‘ಮೀ ಟೂ’ ಅಭಿಯಾನ ಒಳ್ಳೆಯದ್ದೇ.
ಆದರೆ, ದುರುಪಯೋಗ ವಾಗಬಾರದು ಎಂದು ರಂಗಭೂಮಿ ಹಿರಿಯ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಅಭಿ ಪ್ರಾಯಪಟ್ಟಿದ್ದಾರೆ.
‘ಕನ್ನಡಪ್ರಭ’ ಜತೆ ಮಾತನಾಡಿ, ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ‘ಮೀ ಟೂ’ ಪ್ರಕರಣ ನ್ಯಾಯಾಲಯ ಮೆಟ್ಟಿಲು ಹತ್ತಿರುವುದರಿಂದ ಈ ಕುರಿತು ಪ್ರತಿಕ್ರಿಯಿಸಲಾರೆ ಎಂದರು.