ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

ನವದೆಹಲಿ: ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಬೆರಳಚ್ಚು, ಕಣ್ಪೊರೆ ಮೂಲಕ ಯಾರಿಗೆ ಆಧಾರ್ ದೃಢೀಕರಣ ಸಾಧ್ಯವಾಗುವುದಿಲ್ಲವೋ ಅಂಥವರಿಗೆ ಆಧಾರ್ ಪ್ರಾಧಿಕಾರವು ಹೊಸ ಸೌಲಭ್ಯವನ್ನು ಜುಲೈ 1ರಿಂದ ಪರಿಚಯಿಸಲಿದೆ.

ಆದರೆ ಈ ಸೌಲಭ್ಯ ಪಡೆಯಲು ಅರ್ಜಿದಾರರು, ಬೆರಳಚ್ಚು, ಓಟಿಪಿ ಅಥವಾ ಕಣ್ಪೊರೆಯ ಪೈಕಿ ಯಾವುದಾದರೂ ಒಂದು ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇಬೇಕು.

ಕಾಯಿಲೆ, ಕಠಿಣ ಪರಿಶ್ರಮ ಮುಂತಾದ ಬೇರೆ ಬೇರೆ ಕಾರಣಗಳಿಂದ ಕೆಲವರ ಬೆರಳಚ್ಚು ದಾಖಲಾಗುವುದಿಲ್ಲ. ಅಂಥವರಿಗೆ ಈ ಸೌಲಭ್ಯವು ಆಧಾರ್ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಆದರೆ ಇದನ್ನು ಅವಶ್ಯವಿದ್ದಾಗ ಮಾತ್ರ ಬಳಸಲಾಗುವುದೆಂದು ಹೇಳಲಾಗಿದೆ.