Asianet Suvarna News Asianet Suvarna News

ಶಿರೂರು ಶ್ರೀ ಸಾವು : ಹೊಸ ಬೇಟೆಗೆಇಳಿದ ಪೊಲೀಸರು

ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಎಲ್ಲಾ ಕೀಟನಾಶಕ ಅಂಗಡಿಗಳಿಗೆ ಭೇಟಿ ನೀಡಿ ವಿಚಾರಣೆ ಕೈಗೊಂಡಿದ್ದಾರೆ. 

Udupi Krishna Mutt Shiroor Shri Death Case New Angle Investigation
Author
Bengaluru, First Published Aug 2, 2018, 8:40 AM IST

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥರ ಮೃತದೇಹದಲ್ಲಿ ಸಂಶಯಾಸ್ಪದ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂಬ ಕೆಎಂಸಿ ವೈದ್ಯರ ಆಧರಿಸಿ ಈಗ ಪೊಲೀಸರು ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರ ತಂಡವೊಂದು ರಸಗೊಬ್ಬರ - ಕೀಟನಾಶಕಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿದೆ. ಈ ಕೀಟನಾಶಕ-ರಸಗೊಬ್ಬರ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಕೀಟನಾಶಕಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.  

ಚಿನ್ನಾಭರಣ ಸೋದೆ ಮಠಕ್ಕೆ ಹಸ್ತಾಂತರ: ಶಿರೂರು ಶ್ರೀಗಳ ನಿಧನದ ನಂತರ ಪೊಲೀಸರು ತನಿಖೆಗಾಗಿ ತಮ್ಮ ಸುಪರ್ದಿಕ್ಕೆ ತೆಗೆದುಕೊಂಡಿದ್ದ ಶ್ರೀಗಳ ಚಿನ್ನಾಭರಣ, ಹಳೆಯ ಅಮೂಲ್ಯ ವಸ್ತುಗಳು ಮುಂತಾದವುಗಳನ್ನು ಬುಧವಾರ ಶಿರೂರಿನ ದ್ವಂದ್ವ ಮಠವಾದ ಸೋದೆ ಮಠಕ್ಕೆ ಹಸ್ತಾಂತರಿಸಿದ್ದಾರೆ. 

ಉಸ್ತುವಾರಿ ಸಮಿತಿ ನೇಮಕ: ಇದೇವೇಳೆ ಸೋದೆ ಮಠದ ಪರವಾಗಿ ಶಿರೂರು ಮಠದ ಉಸ್ತುವಾರಿಯನ್ನು ನೋಡಿಕೊಳ್ಳಲು ೫ ಮಂದಿಯ ಸಮಿತಿಯೊಂದನ್ನು ನೇಮಿಸಲಾಗಿದೆ. ರಹಸ್ಯ ಆರಾಧನೆ: ಶ್ರೀಪಾದರ ಆರಾಧನೆಯನ್ನು ಶ್ರೀಗಳ ಪೂರ್ವಾಶ್ರಮದ ಸಂಬಂಧಿಕರು ಮೂಲ್ಕಿ ಸಮೀಪದ ಶಿಮಂತೂರು ಆದಿಜನಾರ್ದನ ದೇವಸ್ಥಾನದಲ್ಲಿ ಮಂಗಳವಾರ ರಹಸ್ಯವಾಗಿ ನೆರವೇರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

Follow Us:
Download App:
  • android
  • ios