ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು, ಈಗ ಟಿಟಿವಿ ದಿನಕರನ್ ಸರದಿ!
ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಚೆನ್ನೈ (ಮಾ. 15): ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಅಮ್ಮ ಮಕ್ಕಳ್ ಮುನ್ನೇತ್ರ ಕಳಗಮ್’ ಎನ್ನುವ ಹೊಸ ಪಕ್ಷವನ್ನು ಮಧುರೈನಲ್ಲಿ ಘೋಷಣೆ ಮಾಡಿದ್ದಾರೆ. ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್’ಕೆ ನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದಿನಕರನ್ ಜಯಗಳಿಸಿದ್ದಾರೆ. ದಿನಕರನ್ ವಿರುದ್ಧ ಎಐಎಡಿಎಂಕೆ ಚಿಹ್ನೆ ವಿಚಾರದಲ್ಲಿ ಲಂಚ ಆಮಿಷ ಪ್ರಕರಣದ ಆರೋಪ ಕೇಳಿಬಂದಿತ್ತು. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.