ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ​  ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 

ಚೆನ್ನೈ (ಮಾ. 15): ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ​ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 

ಅಮ್ಮ ಮಕ್ಕಳ್​​ ಮುನ್ನೇತ್ರ ಕಳಗಮ್’ ಎನ್ನುವ ಹೊಸ ಪಕ್ಷವನ್ನು ಮಧುರೈನಲ್ಲಿ ಘೋಷಣೆ ಮಾಡಿದ್ದಾರೆ. ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್​’ಕೆ ನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದಿನಕರನ್ ಜಯಗಳಿಸಿದ್ದಾರೆ. ದಿನಕರನ್​ ವಿರುದ್ಧ ಎಐಎಡಿಎಂಕೆ ಚಿಹ್ನೆ ವಿಚಾರದಲ್ಲಿ ಲಂಚ ಆಮಿಷ ಪ್ರಕರಣದ ಆರೋಪ ಕೇಳಿಬಂದಿತ್ತು. ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ.