ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಸೇವೆಗಳಲ್ಲಿ ನಿಯೋಜನೆಯಾದ ಹಿಂದುಯೇತರ 44 ಕೆಲಸಗಾರರನ್ನು ಬೇರೆಡೆ ವರ್ಗಾವಣೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.

ಹೈದರಾಬಾದ್ (ಜ.07): ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಸೇವೆಗಳಲ್ಲಿ ನಿಯೋಜನೆಯಾದ ಹಿಂದುಯೇತರ 44 ಕೆಲಸಗಾರರನ್ನು ಬೇರೆಡೆ ವರ್ಗಾವಣೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ. ನಿಯಮಗಳ ಪ್ರಕಾರ ತಿರುಪತಿಗೆ ಹಿಂದುಯೇತರರು ಭೇಟಿ ನೀಡಬಹುದಾದರೂ, ದೇವಸ್ಥಾನದ ಕೆಲಸಗಳಲ್ಲಿ ಹಿಂದುಯೇತರರು ಭಾಗವಹಿಸುವಂತಿಲ್ಲ.

Add Asianetnews Kannada as a Preferred SourcegooglePreferred

ಆದಾಗ್ಯೂ ದೇವಸ್ಥಾನದ ವಿವಿಧ ಸೇವೆಗ ಳಲ್ಲಿ 44 ಮಂದಿ ಹಿಂದುಯೇತರರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಬೇರೆ ಸರ್ಕಾರಿ ಹುದ್ದೆಗೆ ನಿಯೋಜಿಸಲು ರಾಜ್ಯ ಸರ್ಕಾರ ಕೂಡಾ ಒಪ್ಪಿದೆ ಎಂದು ತಿಳಿಸಿದೆ.