ಲಾರಿ ಮಾಲಕರು ಹಾಗೂ ವಿಮೆ ನಿಯಂತ್ರಣ ಪ್ರಾಧಿಕಾರ ನಡುವೆ ನಡೆದ ಸಭೆ ಯಶಸ್ವಿಯಾಗಿದ್ದು, ವಿಮೆ ಪ್ರೀಮಿಯಮ್ ದರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ.
ಹೈದರಾಬಾದ್ (ಏ.08): ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ಕೊನೆಗೂ ತೆರೆಬಿದ್ದಿದೆ.
ಲಾರಿ ಮಾಲಕರು ಹಾಗೂ ವಿಮೆ ನಿಯಂತ್ರಣ ಪ್ರಾಧಿಕಾರ ನಡುವೆ ನಡೆದ ಸಭೆ ಯಶಸ್ವಿಯಾಗಿದ್ದು, ವಿಮೆ ಪ್ರೀಮಿಯಮ್ ದರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ.
ಇಂದು ಹೈದರಾಬಾದ್’ನಲ್ಲಿ ವಿಮೆ ನಿಯಂತ್ರಣ ಪ್ರಾಧಿಕಾರ ಮುಖ್ಯಸ್ಥ ವಿಜಯನ್ ನೇತೃತ್ವದಲ್ಲಿ ದಕ್ಷಿಣ ವಲಯ ಮೋಟಾರ್ ಸಾರಿಗೆ ಕ್ಷೇಮಾಭಿವೃದ್ಧಿ ಸಂಘದ ಜೊತೆ ಸಭೆ ನಡೆದಿದೆ.
ಈ ಸಭೆಯಲ್ಲಿ ಶೇ.23ರಷ್ಟು ವಿಮೆ ಪ್ರೀಮಿಯಮ್ ದರ ಕಡಿಮೆ ಮಾಡಲು ಐಆರ್ಡಿಎ ಒಪ್ಪಿಗೆ ನೀಡಿದೆ ದು ತಿಳಿದುಬಂದಿದೆ.
