ಸಂಚಾರಿ ಪೊಲೀಸರ ಪ್ರಾಮಾಣಿಕತೆ ಭಲೇ ಭಲೇ!
ರಸ್ತೆಯಲ್ಲಿ ಸಿಕ್ಕ ಮೊಬೈಲ್ ಹಿಂದಿರುಗಿಸಿದ ಟ್ರಾಫಿಕ್ ಪೊಲೀಸ್
ಚಾಮರಾಜಪೇಟೆ ಬಳಿಯ ಮಕ್ಕಳ ಕೂಟದ ಬಳಿ ಘಟನೆ
ಮಾಲೀಕನಿಗೆ ಕರೆ ಮಾಡಿ ಮೊಬೈಲ್ ಹಿಂದಿರುಗಿಸಿದ ಪೊಲೀಸರು
ಪೊಲೀಸರ ಪ್ರಾಮಾಣಿಕತೆಗೆ ಹಿರಿಯ ಅಧಿಕಾರಿಗಳ ಶ್ಲಾಘನೆ
ಬೆಂಗಳೂರು(ಜು.13): ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ನ್ನು ವಾರಸುದಾರರಿಗೆ ಹಿಂತಿರುಗಿಸಿದ ಸಂಚಾರಿ ಪೊಲೀಸರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ಚಾಮರಾಜಪೇಟೆ ಸಮೀಪದ ಮಕ್ಕಳ ಕೂಟದ ಬಳಿ, ವಿವಿ ಪುರಂ ಸಂಚಾರಿ ಪೊಲೀಸರಾದ ಎಎಸ್ ಐ ಗೋಪಾಲಯ್ಯ ಮತ್ತು ಪೇದೆ ನಾಗರಾಜ್ ಕರ್ತವ್ಯದಲ್ಲಿದ್ದರು. ಈ ವೇಳೆ ರಸ್ತೆಯಲ್ಲಿ ಮೊಬೈಲ್ ವೊಂದು ಬಿದ್ದಿದ್ದು ಅವರಿಗೆ ಕಾಣಿಸಿದೆ.
ಕೂಡಲೇ ಮೊಬೈಲ್ ವಶಕ್ಕೆ ಪಡೆದು ಮಾಲೀಕನನ್ನು ಸಂಪರ್ಕಿಸಿ ಮೊಬೈಲ್ ನ್ನು ಹಿಂದಿರುಗಿಸಿದ್ದಾರೆ. ವಿವಿ ಪುರಂ ಪೊಲೀಸರ ಕರ್ತವ್ಯ ನಿಷ್ಠೆಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.