ಹಾಸನ(ಅ.05): ಯುವಕರ ಗುಂಪೊಂದು 9 ವರ್ಷದ ಬಾಲಕನ ಮೇಲೆ ಅಮಾನವೀಯವಾಗಿ ದೌರ್ಜನ್ಯ ಎಸಗಿ, ಹಿಂಸೆ ನೀಡಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ತೆಂಗಿನ ಮರವನ್ನ ಏರಿದ್ದ ಎನ್ನುವ ಕಾರಣಕ್ಕೆ ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆದು, ಚುಚ್ಚಿ ಬಾಲಕನನ್ನು ವಿಕೃತವಾಗಿ ಥಳಿಸಿದ್ದಾರೆ. ಮುಬಾರಕ್, ಶರ್ಪು, ಅರ್ಪನ್, ಸದ್ದಾಂ ಸೇರಿದಂತೆ ಆರು ಮಂದಿಯ ಯುವಕರ ತಂಡ ಈ ದುಷ್ಕೃತ್ಯ ಎಸಗಿದೆ. ಬಾಲಕ ಪದೇ ಪದೇ ನನ್ನನ್ನ ಬಿಟ್ಟುಬಿಡಿ ಅಂತಾ ಅಂಗಲಾಚಿದರೂ, ಬಾಲಕನಿಗೆ ಮುಳ್ಳಿನಿಂದ ಚುಚ್ಚಿ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಇರುವೆ ಗೂಡಿದ್ದ ಕಲ್ಲಿನ ಮೇಲೆ ನಿಲ್ಲಿಸಿ, ಬಾಲಕ ನೋವಿನಿಂದ ಬಳಲುತ್ತಿದ್ದರೆ ಇವರೆಲ್ಲರೂ ಮಜಾ ತೆಗೆದುಕೊಳ್ಳುತ್ತಾ ನಕ್ಕಿದ್ದಾರೆ.

ಆ ಯುವಕರೇ ಮೊಬೈಲ್​'ನಲ್ಲಿ ಚಿತ್ರೀಕರಿಸಿದ ಮೇಲೆಯೂ ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯ ಈ ಬಗ್ಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.