ಚೆನ್ನೈ(ಸೆ.16): ಇಂದು ತಮಿಳುನಾಡು ಸಂಪೂರ್ಣ ಬಂದ್ ಆಗಲಿದೆ. ಸಾರಿಗೆ ಸಂಚಾರ ಬಂದ್ ಆಗಲಿದೆ. ಹೋಟೆಲ್, ವಸತಿಗೂ ತತ್ವಾರವಾಗಲಿದೆ.
ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಅಂತ ಆರೋಪಿಸಿ ಬಂದ್ಗೆ ಕರೆ ನೀಡಿವೆ. ಈ ಬಂದ್ಗೆ ರಾಜಕೀಯ ಪಕ್ಷಗಳಾದ ಡಿಎಂಕೆ, ವಿಜಯಕಾಂತ್ ನೇತೃತ್ವದ ಡಿಎಂಡಿಕೆ, ವಿಸಿಕೆ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲವೂ ಇದೆ.
ಬಂದ್ ಹಿನ್ನೆಲೆಯಲ್ಲಿ ತಮಿಳುನಾಡಿನ ಕಡೆ ಹೋಗೋ ಜನರು ಸ್ವಲ್ಪ ಎಚ್ಚರದಿಂದ ಇರಬೇಕು. ಕರ್ನಾಟಕ ನೋಂದಣಿ ಇರೋ ವಾಹನಗಳಲ್ಲಿ ತಮಿಳುನಾಡು ಕಡೆ ಹೋಗದೇ ಇರೋದು ಒಳ್ಳೇದು. ಇನ್ನು ವಿನಾಕಾರಣ ವದಂತಿಗಳಿಗೆ ಕಿವಿಗೊಡದೆ ಶಾಂತಿಯಿಂದ ಇರಬೇಕು.
ಈ ಮಧ್ಯೆ ಬಂದ್ ವೇಳೆ ಕನ್ನಡಿಗರಿಗೆ ಸೂಕ್ತ ರಕ್ಷಣೆ ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ ತಮಿಳುನಾಡು ಸಿಎಂ ಜಯಲಲಿತಾಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇನ್ನೊಂದೆಡೆ ಗೃಹ ಸಚಿವ ಪರಮೇಶ್ವರ್ ಮನ್ನೆಚ್ಚರಿಕೆ ವಹಿಸೋದಾಗಿ ಹೇಳಿದ್ದಾರೆ
ಜೊತೆಗೆ ಶನಿವಾರ ಮತ್ತು ಭಾನುವಾರವೂ ಕಾವೇರಿ ಸಂಬಂಧ ಪ್ರತಿಭಟನೆಗೆ ನರೆಯ ರಾಜ್ಯದ ವಿವಿಧ ಸಂಘಟನೆಗಳು ಮುಂದಾಗಿವೆ. ಹೀಗಾಗಿ, ಪ್ರಯಾಣಿಕರು ಮತ್ತು ಪ್ರವಾಸಿಗರು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೇದು..
