ತಿರುಪತಿ ಭಕ್ತರೇ ಇಲ್ಲೊಮ್ಮೆ ಗಮನಿಸಿ : 9 ದಿನ ದೇವಾಲಯ ಕ್ಲೋಸ್
ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರೋದ್ರಿಂದ 9 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರಾಕರಿಸಿದೆ. ಈ ಕುರಿತು ದೇವಾಲಯದ ಆಡಳಿತ ಮಂಡಳಿ ಶನಿವಾರ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ.
ತಿರುಪತಿ : ಆಗಸ್ಟ್ ತಿಂಗಳಿನಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ದರೆ ಇಲ್ಲಿ ಗಮನಿಸಿ. ಯಾಕೆಂದರೆ ತಿರುಪತಿ ದೇವಾಲಯದಲ್ಲಿ ಆಗಸ್ಟ್ ತಿಂಗಳಲ್ಲಿ 9 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರೋದ್ರಿಂದ 9 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರಾಕರಿಸಿದೆ. ಈ ಕುರಿತು ದೇವಾಲಯದ ಆಡಳಿತ ಮಂಡಳಿ ಶನಿವಾರ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ. ತಿರುಪತಿಯಲ್ಲಿ ಪ್ರತೀ 12 ವರ್ಷಕ್ಕೊಮ್ಮೆ ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಪೂಜೆ ನಡೆಸಲಾಗುತ್ತದೆ.
11ನೇ ತಾರೀಖಿನಂದು ಪೂಜೆಗೆ ಅಂಕುರಾರ್ಪಣೆ ನಡೆಯಲಿದ್ದು 16ನೇ ತಾರೀಖಿನವರೆಗೆ ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ನಡೆಯುತ್ತದೆ.
ಈ ಸಮಯದಲ್ಲಿ ಆಯ್ದ 30 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಈ ದಿನಗಳನ್ನು ಹೊರತು ಪಡಿಸಿ ಪ್ಲಾನ್ ಮಾಡಲು ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.