ಗೌರಿ ಲಂಕೇಶ್​​ ಆಪ್ತನಿಗೆ ಕೊಲೆ ಬೆದರಿಕೆ

ಬೆಂಗಳೂರು(ಸೆ.07): ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾಗಿ 48 ಗಂಟೆ ಕಳೆದಿದ್ದು, ಈಗ ಅವರ ಆಪ್ತರಾದ ವಿಚಾರವಾದಿ ಭಾಸ್ಕರ್ ಪ್ರಸಾದ್​ಗೆ ಬೆದರಿಕೆ ಕರೆ ಬಂದಿದೆ.ಮಂಗಳೂರು ಮೂಲದ ಪುನೀತ್ ಎಂಬಾತನಿಂದ ಬೆದರಿಕೆ ಕರೆ ಬಂದಿದೆ. ಗೌರಿಯವರಿಗೆ ಆಪ್ತರಾಗಿದ್ದ ಇವರು ಉಡುಪಿ ಚಲೋ ನೇತೃತ್ವ ವಹಿಸಿದ್ದರು. ಈ ಸಂಬಂಧ ನನಗೆ ಜೀವ ಬೆದರಿಕೆ ಕರೆಯಿರುವುದಾಗಿ ಭಾಸ್ಕರ್ ಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.