ಸಿದ್ದಗಂಗಾ ಸ್ವಾಮೀಜಿಗಳು ಅಪಾರ ಭಕ್ತ ಗಣವನ್ನು ಬಿಟ್ಟು ಅಗಲಿದ್ದಾರೆ. ಅವರ ಗೌರವಾರ್ಥವಾಗಿ ಸರಕಾರ 3 ದಿನ ಶೋಕಾಚರಣೆಯನ್ನು ಸೋಮವಾರವೇ ಘೋಷಣೆ ಮಾಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ಮಾಡಿತ್ತು. ಆದರೆ ಇದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ಬರೆದುಕೊಂಡಿದ್ದು  ಇದೀಗ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು[ಜ.22] ಬೆಂಗಳೂರಿನಲ್ಲಿ ಇರುವ ಈ ಮಹಿಳೆಗೆ ಸಿದ್ಧಗಂಗಾ ಸ್ವಾಮೀಜಿ ಯಾರು ಎಂಬುದು ಗೊತ್ತಿಲ್ಲವಂತೆ! ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಕ್ಕೆ ಇವಳು ಟ್ವಿಟರ್‌ನಲ್ಲಿ ತನ್ನ ಅಭಿಪ್ರಾಯ ಬರೆದಿದ್ದಾರೆ. 

Add Asianetnews Kannada as a Preferred SourcegooglePreferred

ಯಾಕೆ ಮತ್ತು ಯಾವ ಕಾರಣಕ್ಕೆ ಸರಕಾರಗಳು ಇಂಥ ಕ್ರಮ ತೆಗೆದುಕೊಳ್ಳುತ್ತವೆಯೋ ಗೊತ್ತಿಲ್ಲ. ಕಾರಣವಿಲ್ಲದೇ ರಜೆ ಘೋಷಣೆ ಮಾಡುವ ಹವ್ಯಾಸ ಬದಲಾಬೇಕು. ಈ ಬಗ್ಗೆ ಮೀಟಿಂಗ್ ಮಾಡೋಣ ಎಂದು ಸಹ ಹೇಳಿದ್ದಾರೆ. 

ಮೋನಿಕಾ ಹೆಸರಿನ ಮಹಿಳೆ ಬೆಂಗಳೂರಿನಿಂದಲೇ ಟ್ವೀಟ್ ಮಾಡಿದ್ದಾರೆ. ಇವರ ಹೇಳಿಕೆ ಗಮನಿಸಿದರೆ ಯಾವುದೋ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಆಗಿರಬಹದು ಎಂದು ಭಾವಿಸಬಹುದು.