ಗುಹೆಯಲ್ಲಿ ವಾರಗಟ್ಟಲೇ ಸಿಕ್ಕಿಹಾಕಿಕೊಂಡಿದ್ದ ಬಾಲಕರು ಅಪಾಯಕಾರಿ ನೀರಿನಾಳದ ರಕ್ಷಣೆಯ ವೇಳೆ ಆತಂಕಕ್ಕೆ ಒಳಗಾಗುವುದನ್ನು ತಡೆಯಲು ಕುದುರೆಗಳನ್ನು ನಿಸ್ತೇಜಗೊಳಿಸಲು ನೀಡಲಾಗುವ ಮಾದಕದ್ರವ್ಯವನ್ನು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ಮಾ ಸಾಯ್‌ (ಥಾಯ್ಲೆಂಡ್‌): ಗುಹೆಯಲ್ಲಿ ವಾರಗಟ್ಟಲೇ ಸಿಕ್ಕಿಹಾಕಿಕೊಂಡಿದ್ದ ಬಾಲಕರು ಅಪಾಯಕಾರಿ ನೀರಿನಾಳದ ರಕ್ಷಣೆಯ ವೇಳೆ ಆತಂಕಕ್ಕೆ ಒಳಗಾಗುವುದನ್ನು ತಡೆಯಲು ಕುದುರೆಗಳನ್ನು ನಿಸ್ತೇಜಗೊಳಿಸಲು ನೀಡಲಾಗುವ ಮಾದಕದ್ರವ್ಯವನ್ನು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

Add Asianetnews Kannada as a Preferred SourcegooglePreferred

ಮಕ್ಕಳಿಗೆ ಮಾದಕದ್ರವ್ಯ ನೀಡಿದ್ದನ್ನು ಅಧಿಕಾರಿಗಳು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ, ಬಾಲಕರಿಗೆ ಕೆಟಾಮಿನ್‌ ಎಂಬ ಆತಂಕ ನಿವಾರಣಾ ದ್ರವ್ಯವನ್ನು ನೀಡಲಾಗಿತ್ತು ಎಂದು ಥಾಯ್ಲೆಂಡ್‌ ಪ್ರಧಾನಿ ಪ್ರಾಯಟ್‌ ಚಾನ್‌ ಒ ಚಾ ಖಚಿತಪಡಿಸಿದ್ದಾರೆ. 

ಡ್ರಗ್ಸ್‌ ಸೇವಿಸಿದ್ದರಿಂದ ರಕ್ಷಣೆಯ ವೇಳೆ ಬಾಲಕರು ಪ್ರಜ್ಞಾಹೀನರಾಗಿದ್ದರು. ಅವರನ್ನು ಯಾವುದೇ ತೊಂದರೆ ಇಲ್ಲದೇ ಹೊರಗೆ ತರಲಾಯಿತು ಎಂದು ಡೈವರ್‌ಗಳು ತಿಳಿಸಿದ್ದಾರೆ.