ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್​ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್​ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್​ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.

ಮೈಸೂರು (ಡಿ.01): ಕಳೆದ ಆಗಸ್ಟ್​ 1ರಂದು ಮೈಸೂರಿನ ಕೋರ್ಟ್​ ಆವರಣದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಬಂಧಿಸಲ್ಪಟ್ಟಿರುವ ರೋಪಿಗಳನ್ನು ಎನ್’ಐಏ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮೈಸೂರಿಗೆ ಕರೆತಂದಿದ್ದಾರೆ.

ಸ್ಫೋಟದ ಬಳಿಕ ಪರಾರಿಯಾಗಿದ್ದ ಶಂಕಿತ ಉಗ್ರ ಸುಲೇಮಾನ್​ ದಾವೂದ್ ಮಧುರೈನಲ್ಲಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ, ಇಂದು ಬೆಳಿಗ್ಗೆ ಲಕ್ಷ್ಮೀಪುರಂನಲ್ಲಿರುವ ಬಾಂಬ್​ ಸ್ಫೋಟ ಪ್ರಕರಣ ತನಿಖಾಧಿಕಾರಿ, ಕೆ.ಆರ್. ವಿಭಾಗದ ಎಸಿಪಿ ಮಲ್ಲಿಕ್​ ಅವರ ಕಚೇರಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಲಾಯಿತು.

ಬಳಿಕ ಮೈಸೂರಿನಲ್ಲಿ ಆತ ಭೇಟಿ ನೀಡಿದ್ದ ಎಲ್ಲಾ ಸ್ಥಳಗಳಿಗೂ ಕರೆದೊಯ್ದು ಎನ್​ಐಎ ತಂಡ ಮಾಹಿತಿ ಕಲೆಹಾಕುತ್ತಿದೆ. ನ.28ರಂದು ಮಧುರೈನಲ್ಲಿ ಸಿಕ್ಕಿಬಿದ್ದ ಐವರು ಶಂಕಿತ ಉಗ್ರರ ಪೈಕಿ ಸುಲೇಮಾನ್​ ದಾವೂದ್ ಮೈಸೂರಿನ ಕೋರ್ಟ್​ನಲ್ಲಿ ಬಾಂಬ್​ ಇರಿಸಿದ್ದ ಎಂದು ಪ್ರಾಥಮಿಕ ತಿಳಿದುಬಂದಿತ್ತು.