Asianet Suvarna News Asianet Suvarna News

ಸೀಟಿಗಾಗಿ ಜಗಳ, ಬೀಫ್ ವದಂತಿ: ಬರ್ಬರವಾಗಿ ಥಳಿಸಿ ಓರ್ವನ ಹತ್ಯೆ

 ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ. ಜುನೈದ್ ಹಾಗೂ ಆತನಿಬ್ಬರು ಸಹೋದರರು ಶುಕ್ರವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

teenager stabbed to death in Haryana train after mob accused victim of carrying beef

ಪಲ್ವಾಲ್, ಹರ್ಯಾಣ:  ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ.

ಜುನೈದ್ ಹಾಗೂ ಆತನಿಬ್ಬರು ಸಹೋದರರು ಗುರುವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರೈಲಿನಲ್ಲಿ ಸೀಟು ವಿಚಾರವಾಗಿ ಇತರ ಪ್ರಯಾಣಿಕರೊಂದಿಗೆ ಮಾತಿಗೆ ಮಾತು ಬೆಳೆದಿದೆ, ಆ ಸಂದರ್ಭದಲ್ಲಿ ಒಬ್ಬ ಜುನೈದ್’ಗೆ ಚಾಕುವಿನಿಂದ ಇರಿದಿದ್ದಾನೆ. ಗುಂಪು ಬಳಿಕ ಜುನೈದ್’ನ ಸಹೋದರರಿಗೆ ಬರ್ಬರವಾಗಿ ಥಳಿಸಿದೆ.

ಥಳಿಸುವ ಮುನ್ನ ಅವರು ತಮ್ಮ ಚೀಲಗಳಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾರೆಂದು ಗುಲ್ಲೆಬ್ಬಿಸಲಾಗಿತ್ತು ಎಂದು ವರದಿಯಾಗಿದೆ. ನಮ್ಮನ್ನು ಥಳಿಸುವಾಗ ಆ ಗುಂಪು ನಮ್ಮ ಧರ್ಮವನ್ನು ನಿಂದಿಸಿತಲ್ಲದೇ,  ಗೋಮಾಂಸ ತಿನ್ನುವವರೆಂದು ಹೀಯಾಳಿಸಲಾಯಿತೆಂದು ಓರ್ವ ಸಹೋದರ ಏಎನ್’ಐಗೆ ತಿಳಿಸಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios