ಕಾವೇರಿ ವಿಚಾರ ಯಾವಾಗಲೂ ಹೊಗೆಯಾಡ್ತಾನೆ ಇರುತ್ತೆ. ಇದೀಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕ ತಮಿಳುನಾಡಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಚೆನ್ನೈ(ಜು.05): ಕಾವೇರಿ ವಿಚಾರ ಯಾವಾಗಲೂ ಹೊಗೆಯಾಡ್ತಾನೆ ಇರುತ್ತೆ. ಇದೀಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕ ತಮಿಳುನಾಡಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
2016 ರಲ್ಲಿ ಕರ್ನಾಟಕದಿಂದ 6 ಟಿಎಂಸಿ ನೀರು ಕಡಿಮೆ ಬಿಡಲಾಗಿದೆ. ಹಾಗಾಗಿ ನಮಗೆ ಬರಬೇಕಾದ ನೀರು ಬಿಡಿಸಿ, ನಮಗೆ ನ್ಯಾಯ ಕೊಡಿಸಿ ಅಂತ ಆಗ್ರಹಿಸಿ, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಕರ್ನಾಟಕದಲ್ಲಿ ಸರಿಯಾದ ಮಳೆ ಬೀಳದೇ, ಕಾವೇರಿ ಒಡಲಿನಲ್ಲಿ ನೀರಿಲ್ಲದ ಸಮಯದಲ್ಲೇ ತಮಿಳುನಾಡು ಕ್ಯಾತೆ ತೆಗಿದಿರುವುದು ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
