Asianet Suvarna News Asianet Suvarna News

ಸರ್ಕಾರಿ ಕಚೇರಿಗೆ ಬೇಕಂತೆ ಸಿಎ ನಿವೇಶನದ ಜಾಗ!

ಪಟ್ಟಣದಲ್ಲಿ ಹಲವು ಕಡೆ 14 ಕಚೇರಿಗಳು ಇವೆ. ಅವುಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ರೆ ಜಾಗ ಸಾಲುವುದಿಲ್ಲ. ಆ ಕಾರಣದಿಂದ ಅಮರಾವತಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ಸಿ ಎ ನಿವೇಶನಗಳನ್ನು ನೀಡಬೇಕೆಂದು  ತಹಶೀಲ್ದಾರ್ ಡಿಸಿ ಬಳಿ ಮನವಿ ಮಾಡಿದ್ದಾರೆ.

Tahasildar Writes to DC For Land to Build Mini Vidhansoudha

ದಾವಣಗೆರೆ (ಡಿ.15): ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕಳೆದ ವರ್ಷವಷ್ಟೇ ನೂತನ ಮಿನಿವಿಧಾನಸೌಧ ಲೋಕಾರ್ಪಣೆಗೊಂಡು ಈಗ  ಸಾರ್ವಜನಿಕ ಸೇವೆ ನೀಡುತ್ತಿದೆ. ಆದರೆ ಇದೀಗ ಈ ತಾಲೂಕಾ ಕಚೇರಿಗೆ ಮತ್ತೊಂದು ಮಿನಿವಿಧಾನಸೌಧದ ಕಚೇರಿಯ ಅವಶ್ಯಕತೆಯಿದೆ ಎಂದು ತಹಸೀಲ್ದಾರ್​ ಡಿಸಿಗೆ ಪತ್ರ ಬರೆದಿದ್ದಾರೆ.

ಪಟ್ಟಣದಲ್ಲಿ ಹಲವು ಕಡೆ 14 ಕಚೇರಿಗಳು ಇವೆ. ಅವುಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ರೆ ಜಾಗ ಸಾಲುವುದಿಲ್ಲ. ಆ ಕಾರಣದಿಂದ ಅಮರಾವತಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ಸಿ ಎ ನಿವೇಶನಗಳನ್ನು ನೀಡಬೇಕೆಂದು  ತಹಶೀಲ್ದಾರ್ ಡಿಸಿ ಬಳಿ ಮನವಿ ಮಾಡಿದ್ದಾರೆ.

ಅಧಿಕಾರಿಗಳು ಹೀಗೆ ಡಿಸಿ ಬಳಿ ಬೇಡಿಕೆ ಇಡಲು ಸ್ಥಳೀಯ ಶಾಸಕ ಹೆಚ್.ಎಸ್.ಶಿವಶಂಕರ್ ಕೈವಾಡಯಿದೆ.

ಶಾಸಕರು ನಾಗರಿಕ ನಿವೇಶನದ ಹೆಸರಿನಲ್ಲಿ ಗೋಲ್ಮಾಲ್ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios