ಕೋವಿಂದ್ ಪುತ್ರಿಯ ಗಗನಸಖಿ ಹುದ್ದೆಗೆ ಕುತ್ತು!
ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಪುತ್ರಿ ಸ್ವಾತಿ ಅವರನ್ನು ಭದ್ರತಾ ದೃಷ್ಟಿಯಿಂದ ನಿಲ್ದಾಣದೊಳಗಿನ ಕೆಲಸಕ್ಕೆ ನಿಯೋಜಿಸಲಾಗಿದೆ.
ನವದೆಹಲಿ: ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಪುತ್ರಿ ಸ್ವಾತಿ ಅವರನ್ನು ಭದ್ರತಾ ದೃಷ್ಟಿಯಿಂದ ನಿಲ್ದಾಣದೊಳಗಿನ ಕೆಲಸಕ್ಕೆ ನಿಯೋಜಿಸಲಾಗಿದೆ.
ಸ್ವಾತಿ ಅವರನ್ನು ಕಳೆದ ಒಂದು ತಿಂಗಳಿನಿಂದ ಏರ್ ಇಂಡಿಯಾದ ಆಂತರಿಕ ವಿಭಾಗಕ್ಕೆ ವರ್ಗಾಯಿಸಲಾಗಿದೆ. ರಾಷ್ಟ್ರಪತಿ ಪುತ್ರಿಯಾಗಿ ಸ್ವಾತಿ ಅವರು ವಿಮಾನದಲ್ಲಿ ಸಿಬ್ಬಂದಿಯಾಗಿ ಹಾರಾಟ ನಡೆಸುವುದು ತರವಲ್ಲ. ಅವರಿಗಾಗಿ ಪ್ರಯಾಣಿಕರನ್ನು ನಿರ್ಬಂಧಿಸಲಾಗದು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.