ಇನ್ನು ಫರೂಕ್​ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ.

ಕೊಪ್ಪಳ (ಫೆ.19): ಸೂಡಾನ್ ದೇಶದಲ್ಲಿ ಉಗ್ರ ಗುಂಡೇಟಿಗೆ ಕೊಪ್ಪಳದ ಯುವಕನೊರ್ವ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗಂಗಾವತಿಯ 25 ವರ್ಷದ ಫರೂಕ್ ಎನ್ನುವ ಯುವಕ ಸೂಡಾನ್​ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನು ಮೃತ ಫರೂಕ್​​ ಸೂಡಾನದ ಜ್ಯೂಬಾದ ಒಮಸ್ಕಿ ಎಂಬ ಕಂಪನಿಯಲ್ಲಿ ಸುಪರವೈಜರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಫರೂಕ್​ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವೆ ಸುಷ್ಮಾ ಸ್ವರಾಜ್​​​​, ಮೃತ ದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಫರೂಕ್​​ನ ಕುಟುಂಬಸ್ಥರು ಆಂಧ್ರಪ್ರದೆಶದ ಕರ್ನೂಲ್​​​​ನಲ್ಲಿದ್ದಾರೆ. ಇನ್ನು ಫರೂಕ್​ನ ಮೃತದೇಹ ಮಂಗಳವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.