ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.

Add Asianetnews Kannada as a Preferred SourcegooglePreferred

‘ಲಿಂಗಾಯತರು ಮೂತ್ರ ಮಾಡಿದರೆ ವೀರಶೈವರು ಕೊಚ್ಚಿ ಹೋಗುತ್ತಾರೆ’ ಎಂದು ಶ್ರೀಗಳು ಆಡಿದ್ದಾರೆನ್ನಲಾದ ಮಾತುಗಳು ಈಗ ವೈರಲ್ ಆಗಿವೆ. ಆದರೆ ಆ ಧ್ವನಿ ತಮ್ಮದಲ್ಲ. ಆ ಆಡಿಯೋಗೂ ತಮಗೂ ಸಂಬಂಧವಿಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಮಹದಾಯಿ ಹೋರಾಟದ ಸಂದರ್ಭದಲ್ಲಿ ನರಗುಂದದ ಸೊಬರದ ಮಠ ಶ್ರೀಗಳು ‘ಕೂಡಲಸಂಗಮ ಶ್ರೀಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಕೊಪ್ಪಳದ ಭಕ್ತರೊಬ್ಬರೊಂದಿಗೆ ಕೂಡಲಸಂಗಮ ಶ್ರೀಗಳು ಮೊಬೈಲ್‌ನಲ್ಲಿ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ‘ಬಹುಸಂಖ್ಯಾತರಾದ ನಾವೆಲ್ಲ ಮೂತ್ರ ಮಾಡಿದರೆ ಅವರೆಲ್ಲ ಕೊಚ್ಚಿ ಹೋಗುತ್ತಾರೆ. ಅವರಿಗೆ ನಾವು ಹೆದರಬೇಕಾಗಿಲ್ಲ’ ಎನ್ನುವ ಸಂಭಾಷಣೆ ಇತ್ತು. ಈ ಆಡಿಯೋ ವೈರಲ್ ಆಗಿತ್ತು.

ಈ ಆರೋಪವನ್ನು ಅಂದೇ ಶ್ರೀಗಳು ಅಲ್ಲಗಳೆದಿದ್ದರು. ಆದರೆ ನ.5ರ ಲಿಂಗಾಯತ ಸಮಾವೇಶದ ಬಳಿಕ ಮತ್ತೆ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.