ರಿಸೆಪ್ಷನ್ ಹಾಲಲ್ಲೇ ಟಾಯ್ಲೆಟ್ ನಿರ್ಮಿಸಿ ಸ್ವಚ್ಚ ಭಾರತ್ ಜಾಗೃತಿ
ಮದುವೆಯ ನಂತರ ರಿಸೆಪ್ಷನ್ ವೇಳೆ ವೇದಿಕೆಯನ್ನು ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗುತ್ತದೆ. ಆದರೆ, ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯ ಬಗ್ಗೆ ಅರಿವು ಮೂಡಿಸಲು ನವ ದಂಪತಿ ಮದುವೆ ಮಂಟಪದ ಪಕ್ಕ ಟಾಯ್ಲೆಟ್ನ ಮಾದರಿಯೊಂದನ್ನು ನಿರ್ಮಿಸಿದ್ದಾರೆ.
ಹೈದರಾಬಾದ್ (ಮೇ. 01): ಮದುವೆಯ ನಂತರ ರಿಸೆಪ್ಷನ್ ವೇಳೆ ವೇದಿಕೆಯನ್ನು ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗುತ್ತದೆ. ಆದರೆ, ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯ ಬಗ್ಗೆ ಅರಿವು ಮೂಡಿಸಲು ನವ ದಂಪತಿ ಮದುವೆ ಮಂಟಪದ ಪಕ್ಕ ಟಾಯ್ಲೆಟ್ನ ಮಾದರಿಯೊಂದನ್ನು ನಿರ್ಮಿಸಿದ್ದಾರೆ.
ಮದುವೆಗೆ ಬಂದವರೆಲ್ಲಾ ವೇದಿಕೆಯ ಮೇಲೆ ಟಾಯ್ಲೆಟ್ ಇರುವುದನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ದಂಪತಿಯ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.