ನಂಜನಗೂಡು ಕ್ಷೇತ್ರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನ ರಾಜಕೀಯ ಪ್ರವೇಶ ಆಗುವ ಹಿನ್ನೆಲೆಯಲ್ಲಿ  ಟಿ.ನರಸೀಪುರ ತಾಲೂಕಿನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಉಣಬಡಿಸಿದ್ದಾರೆ.

ಮೈಸೂರು (ನ.01): ನಂಜನಗೂಡು ಉಪಚುನಾವಣೆಗೆ ಸಚಿವ ಮಹದೇವಪ್ಪ ಪುತ್ರನ ಭರ್ಜರಿ ಸಿದ್ಧತೆ ನಡೆಯುತ್ತಿದೆ. 

ಸಚಿವರ ಪುತ್ರ ಸುನೀಲ್ ಬೋಸ್​ 5 ಸಾವಿರ ಕಾರ್ಯಕರ್ತರಿಗೆ ಬಾಡೂಟ ಆಯೋಜಿಸಿದ್ದರು.

ನಂಜನಗೂಡು ಕ್ಷೇತ್ರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನ ರಾಜಕೀಯ ಪ್ರವೇಶ ಆಗುವ ಹಿನ್ನೆಲೆಯಲ್ಲಿ ಟಿ.ನರಸೀಪುರ ತಾಲೂಕಿನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಉಣಬಡಿಸಿದ್ದಾರೆ.

ಸುನೀಲ್​​ ಬೋಸ್ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಹಿನ್ನೆಲೆಯಲ್ಲಿ ಕಣಕ್ಕಿಳಿಯಲು ಈಗಿನಿಂದಲೇ ಸಿದ್ಧತೆ ನಡೆಯುತ್ತಿದ್ದು , ಕಾರ್ಯಕರ್ತರನ್ನು ಸೆಳೆಯಲು ಈ ಬಾಡೂಟ ಆಯೋಜಿಸಿದ್ದರು.