ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಸುಬ್ರಮಣಿಯನ್ ಸ್ವಾಮಿ| ಮೋದಿಗೆ ನನ್ನ ಐಡಿಯಾಗಳು ಹಿಡಿಸುತ್ತಿಲ್ಲ ಎಂದ ಸ್ವಾಮಿ| ಮೋದಿಗೆ ನಾ ಬೇಡವಾದರೆ ಚೀನಾಗೆ ತೆರಳುವೆ ಎಂದ ಬಿಜೆಪಿ ನಾಯಕ| ಚೀನಾದ ಪ್ರಸಿದ್ಧ ತ್ರಿಂಪುವಾ ವಿವಿಯಲ್ಲಿ ನಡೆಯಲಿರುವ ವಿಚಾರ ಸಂಕೀರ್ಣದಲ್ಲಿ ಸ್ವಾಮಿ ಭಾಗಿ|

ನವದೆಹಲಿ(ಜು.02): ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮೋದಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿಗೆ ನನ್ನ ಯೋಜನೆಗಳು ಬೇಡವಾಗಿವೆ ಎಂದು ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಧಾನಿ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ, ಅವರಿಗೆ ನನ್ನ ಐಡಿಯಾಗಳೂ ಹಿಡಿಸುತ್ತಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ.

Scroll to load tweet…

ಈ ಕುರಿತು ಟ್ವೀಟ್ ಮಾಡಿರುವ ಸ್ವಾಮಿ, ಮೋದಿ ಅವರಿಗೆ ನನ್ನ ಯೋಜನೆಗಳು ಹಿಡಿಸುತ್ತಿಲ್ಲ, ಆದರೆ ಚೀನಾ ಮಾತ್ರ ನನ್ನ ಯೋಜನೆಗಳನ್ನು ಮೆಚ್ಚಿ ಸಭೆಗೆ ಆಹ್ವಾನಿಸಿದೆ ಎಂದು ತಿಳಿಸಿದ್ದಾರೆ.

ಚೀನಾದ ಪ್ರಸಿದ್ಧ ತ್ರಿಂಪುವಾ ವಿವಿಯಲ್ಲಿ ನಡೆಯಲಿರುವ China’s Economic Development: A Review Of Last 70 years.” ಎಂಬ ವಿಚಾರ ಸಂಕೀರ್ಣದಲ್ಲಿ ಸುಬ್ರಮಣಿಯನ್ ಸ್ವಾಮಿ ಭಾಗವಹಿಸಲಿದ್ದಾರೆ.