Asianet Suvarna News Asianet Suvarna News

ಪ್ರೀತಿ ಮಾಡಿದ ತಪ್ಪಿಗೆ ಸಿಕ್ಕ ಶಿಕ್ಷೆ: ಮಾರ್ಯಾದೆಗಾಗಿ ಅಳಿಯನನ್ನೇ ಹತ್ಯೆಗೈದು ಸುಟ್ಟು ಹಾಕಿದ ಸಬ್ ಇನ್ಸ್'ಪೆಕ್ಟರ್!

Sub Inspector Killed His Son In Law For Honor

ಅಮರಾವತಿ(ಸೆ.13): ಅಮರಾವತಿಯಲ್ಲಿ ಮರ್ಯಾದಾ ಹತ್ಯೆ ನಡೆದ ಘಟನೆಯೊಂದು ಬೆಳಕಿಗೆ ಬಂದಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪ ನಿರೀಕ್ಷಕ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ ಪೊಲೀಸ್ ಅಧಿಕಾರಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಅಮರಾವತಿಯ ಸಚಿನ್ ಸಿಮೋಲಿಯಾ ಇಲ್ಲಿನ ವಶೀಮ್ ಜಿಲ್ಲೆಯ ಉಪ ನಿರೀಕ್ಷಕ ತುಕಾರಾಮ್ ಠೋಕೆ ಎಂಬವರ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಯ ಮನೆಯವರಿಗೆ ಈ ವಿಚಾರದಿಂದ ಅಸಮಾಧಾನವಿತ್ತು. ಮನೆಯವರ ವಿರೋಧದ ನಡುವೆಯೂ ಇವರಿಬ್ಬರು 2016ರ ಏಪ್ರಿಲ್ 1 ರಂದು ವಿವಾಹವಾಗಿದ್ದರು.

ಇದರಿಂದ ಕುಪಿತಗೊಂಡ ಯುವತಿಯ ತಂದೆ ಏಪ್ರಿಲ್ 25ರಂದು ಉಪಾಯದಿಂದ ಸಚಿನ್'ನನ್ನು ತನ್ನ ಮನೆಗೆ ಕರೆಸಿದ್ದು, ಬಳಿಕ ಮಗಳನ್ನು ಮನೆಯಲ್ಲೇ ನಿಲ್ಲಿಸಿ ಹುಡುಗನನ್ನು ಸುತ್ತಾಡಿಕೊಂಡು ಬರುವ ನೆಪದಲ್ಲಿ ಕಾಡಿಗೆ ಕರೆದೊಯ್ದಿದ್ದ. ಅಲ್ಲಿ ತನ್ನ ಮಗ ಹಾಗೂ ಸೋದರಳಿಯನೊಂದಿಗೆ ಸೇರಿ ಹತ್ಯೆಗೈದು, ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ್ದರು. ಸಾಲದೆಂಬಂತೆ ತನಿಖೆಯ ದಿಕ್ಕು ತಪ್ಪಿಸಲು ಸುಟ್ಟ ಶವಕ್ಕೆ ಮಂಗಳಸೂತ್ರವನ್ನೂ ತೊಡಿಸಿದ್ದರು. ಆದರೆ ಕೊನೆಗೂ ಇವರ ಬಣ್ಣ ಬಯಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾ

Follow Us:
Download App:
  • android
  • ios