ಸಾರಿಗೆ ಬಸ್ ಕಂಡಕ್ಟರ್ ವಿದ್ಯಾರ್ಥಿಯೊಬ್ಬನಿಗೆ ಪಾಸ್​​ ತೋರಿಸುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಕಂಡಕ್ಟರ್​​​ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಮಾರಾಮಾರಿಯೇ ನಡೆದಿದೆ. ಘಟನೆಯಲ್ಲಿ ನಿರ್ವಾಹಕ ಮಧುಸೂಧನ್​ ಬಲ ಕೈ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರನನ್ನು ವಶಕ್ಕೆ ಪಡೆದು ವಿದ್ಯಾರ್ಥಿ ಗುಂಪನ್ನು  ಚದುರಿಸಿದರು.

ಕೋಲಾರ(ಅ.14): ಬಸ್​​ ಪಾಸ್​​ ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್​​​ ಹಾಗೂ ವಿದ್ಯಾರ್ಥಿ ಮಧ್ಯೆ ಮಾರಾಮಾರಿ ನಡೆದ ಘಟನೆ ಕೋಲಾರದಲ್ಲಿ ನಡೆದಿದೆ.

ಸಾರಿಗೆ ಬಸ್ ಕಂಡಕ್ಟರ್ ವಿದ್ಯಾರ್ಥಿಯೊಬ್ಬನಿಗೆ ಪಾಸ್​​ ತೋರಿಸುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಕಂಡಕ್ಟರ್​​​ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಮಾರಾಮಾರಿಯೇ ನಡೆದಿದೆ.

ಘಟನೆಯಲ್ಲಿ ನಿರ್ವಾಹಕ ಮಧುಸೂಧನ್​ ಬಲ ಕೈ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರನನ್ನು ವಶಕ್ಕೆ ಪಡೆದು ವಿದ್ಯಾರ್ಥಿ ಗುಂಪನ್ನು ಚದುರಿಸಿದರು.

ಕೋಲಾರದಿಂದ ಸಿ ಭೈರೆಗೌಡ ಇಂಜನಿಯರ್​​ ಕಾಲೇಜಿಗೆ ಸಾರಿಗೆ ಬಸ್ ಹೋಗಬೇಕಿತ್ತು. ಈ ಬಸ್'ಗೆ ಚಾಲಕ ಕಂ ನಿರ್ವಾಹಕ ಒಬ್ಬರೇ ಆಗಿದ್ದು, ಬಸ್ ಪಾಸ್ ಚೆಕ್ ಮಾಡುವಾಗ ವಿಳಂಬ ಆಗಿದೆ. ಇದರಿಂದ ಗಲಾಟೆ ನಡೆದಿದೆ ಅಂತ ಹೇಳಲಾಗ್ತಿದೆ. ಇನ್ನು ಈ ಗಲಾಟೆಯಿಂದ ನಗರದ ಸುತ್ತಮುತ್ತ ಟ್ರಾಫಿಕ್​ ಜಾಮ್​ ಆಗಿದ್ದು, ಬೇರೆ ವಾಹನಗಳು ಹಾಗೂ ಜನರಿಗೆ ತೊಂದರೆಯಾಗಿದೆ.