Asianet Suvarna News Asianet Suvarna News

ಮಾ. 24ರಂದು ದಾಳಿ ಮಾಡುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಯೋಗಿ ಆದಿತ್ಯನಾಥ್'ಗೆ ಐಸಿಸ್ ಚಾಲೆಂಜ್

ಅನಾಮಧೇಯರು ಬರೆದಿರುವ ಈ ಪತ್ರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷವಾಕ್ಯವಿದೆ.​

stop mayhem on march 24 challenge to yogi adityanath in a letter

ವಾರಾಣಸಿ(ಮಾ. 22): ಬರುವ ಶುಕ್ರವಾರದಂದು ಪೂರ್ವಾಂಚಲದಲ್ಲಿ ಭಾರೀ ದಾಳಿ ನಡೆಯಲಿದ್ದು, ತಾಕತ್ತಿದ್ದರೆ ತಡೆಯಿರಿ ಎಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎಚ್ಚರಿಕೆ ನೀಡಿರುವ ಪತ್ರವೊಂದು ಪತ್ತೆಯಾಗಿದೆ. ಇಲ್ಲಿಯ ಮಿರ್ಜಾಮುರದ್ ಪ್ರದೇಶದಲ್ಲಿ ಪತ್ತೆಯಾಗಿರುವ ಈ ಪತ್ರದಲ್ಲಿ, "ಮಾರ್ಚ್ 24ರಂದು ಪೂರ್ವಾಂಚಲದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತೇವೆ. ತಡೆಯಿರಿ" ಎಂದು ಬರೆಯಲಾಗಿದೆ.

ಪೂರ್ವಾಂಚಲವು ಉತ್ತರಪ್ರದೇಶದ ಪೂರ್ವಭಾಗದಲ್ಲಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಇಲ್ಲಿ ಅಧಿಕವಾಗಿದೆ. ಪತ್ರ ಸಿಕ್ಕಿರುವ ವಾರಾಣಸಿಯು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾಗಿರುವುದೂ ಗಮನಾರ್ಹ.

ಅನಾಮಧೇಯರು ಬರೆದಿರುವ ಈ ಪತ್ರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷವಾಕ್ಯವಿದೆ. ಉತ್ತರಪ್ರದೇಶದ ಪೊಲೀಸರು ಮತ್ತು ದೇಶದ ಗುಪ್ತಚರ ಸಂಸ್ಥೆಗಳು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸ್ಥಳೀಯ ಪತ್ರಿಕೆ ಅಮರ್ ಉಜಾಲಾದಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios