Asianet Suvarna News Asianet Suvarna News

ದಲಿತ, ಹರಿಜನ ಪದ ಬಳಸದಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

ಸರ್ಕಾರಿ ಕಡತಗಳಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸಮುದಾಯವನ್ನು ಗುರುತಿಸುವ ವೇಳೆ ‘ದಲಿತ’, ‘ಹರಿಜನ’ ಪದ ಬಳಸದಂತೆ ಎಲ್ಲಾ ಇಲಾಖೆಗಳು, ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

Stop calling Dalits Harijan

ನವದೆಹಲಿ: ಸರ್ಕಾರಿ ಕಡತಗಳಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸಮುದಾಯವನ್ನು ಗುರುತಿಸುವ ವೇಳೆ ‘ದಲಿತ’, ‘ಹರಿಜನ’ ಪದ ಬಳಸದಂತೆ ಎಲ್ಲಾ ಇಲಾಖೆಗಳು, ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

ಮಾರ್ಚ್ 15ರಂದು ಅಂದರೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ವಿರೋಧಿ ಕಾಯಿದೆ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡುವುದಕ್ಕೂ 5 ದಿನ ಮೊದಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ನಿರ್ದೇಶನವನ್ನು ಹೊರಡಿಸಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಮುಖ್ಯಕಾರ್ಯದರ್ಶಿಗಳಿಗೆ ಕಳುಹಿಸಿರುವ ಪತ್ರದಲ್ಲಿ, ‘ಪರಿಶಿಷ್ಟಜಾತಿ’ ಎಂಬ ಪದವನ್ನೇ ಬಳಸಬೇಕೆದಿದ್ದು, ಇತ್ತೀಚೆಗೆ ಜ.15ರಂದು ಮಧ್ಯಪ್ರದೇಶ ಹೈಕೋರ್ಟ್‌ ‘ದಲಿತ’ ಪದ ಬಳಸದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿದ್ದನ್ನೂ ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios