* ಡಿನೋಟಿಫಿಕೇಷನ್​ ಪ್ರಕರಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಸರ್ಕಾರ* ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾನೂನು ತಂತ್ರಗಾರಿಕೆ* ಎಸಿಬಿ ದಾಖಲಿಸಿರುವ FIR ರದ್ದುಗೊಳಿಸಲು ಯಡಿಯೂರಪ್ಪ ಅರ್ಜಿ* ರಿಟ್​ ಅರ್ಜಿ ಪ್ರಕರಣದಲ್ಲಿ ವಾದ ಮಾಡಲು ನುರಿತ ವಕೀಲರ ನೇಮಕ* ಸಿಎಂ ಆಪ್ತ ಹಾಗೂ ಮಾಜಿ ಅಡ್ವೋಕೇಟ್​ ಜನರಲ್ ರವಿವರ್ಮಕುಮಾರ್​ ವಾದ?* ವಿಶೇಷ ಅಭಿಯೋಜಕರನ್ನಾಗಿ ನೇಮಿಸುವಂತೆ ಎಸಿಬಿ ಡಿಜಿಪಿ ಎಂ.ಎನ್.ರೆಡ್ಡಿ ಪತ್ರ

ಬೆಂಗಳೂರು(ಆ. 22): ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್​ ಪ್ರಕರಣವನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಅಣಿಯಾಗಿ ತಂತ್ರಗಾರಿಕೆ ಮುಂದುವರೆಸಿದೆ. ಬಿಜೆಪಿಗೆ ತಿರುಗೇಟು ನೀಡಲು ಎಲ್ಲಾ ರೀತಿಯ ಕಸರತ್ತು ಆರಂಭಿಸಿದೆ. ಎಸಿಬಿ ದಾಖಲಿಸಿರುವ ಎಫ್​ಐಆರ್ ರದ್ದುಗೊಳಿಸಲು ಬಿಎಸ್​'ವೈ ರಿಟ್​ ಅರ್ಜಿ ದಾಖಲಿಸಿದ್ದಾರೆ. ಅರ್ಜಿ ಪ್ರಕರಣದಲ್ಲಿ ಸಮರ್ಥವಾಗಿ ವಾದ ಮಾಡಲು ಸಿದ್ದರಾಮಯ್ಯ ಅವರ ನಿಕಟವರ್ತಿ ಹಾಗೂ ರಾಜ್ಯದ ಮಾಜಿ ಅಡ್ವೋಕೇಟ್​ ಜನರಲ್ ರವಿವರ್ಮಕುಮಾರ್​​​ ಅವರನ್ನ ನೇಮಿಸಲು ಚಿಂತನೆ ನಡೆಸಿದೆ. ಹೈಕೋರ್ಟ್'​ನಲ್ಲಿ ಸಮರ್ಥವಾಗಿ ವಾದ ಮಾಡಲು ರಾಜ್ಯದ ಮಾಜಿ ಅಡ್ವೋಕೇಟ್​ ಜನರಲ್​ ಪ್ರೊ.ರವಿವರ್ಮಕುಮಾರ್​ ಮತ್ತು ಸೀನಿಯರ್​ ಕೌನ್ಸಿಲ್​'ಗಳನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಸಿಬಿ ಡಿಜಿಪಿ ಎಂ.ಎನ್.ರೆಡ್ಡಿ ಪತ್ರ ಬರೆದಿದ್ದಾರೆ. ವಿವಿಧ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವನ್ನು ಹಲವು ಬಾರಿ ಪ್ರತಿನಿಧಿಸಿ ಅನುಭವ, ಸಾಮರ್ಥ್ಯ ಹೊಂದಿರುವ ಪ್ರೊ.ರವಿವರ್ಮಕುಮಾರ್​ ಅವರನ್ನೇ ಯಡಿರಪ್ಪ ಅವರ ಪ್ರಕರಣದಲ್ಲಿ ವಾದ ಮಂಡಿಸಲು ನೇಮಿಸುವ ಸಾಧ್ಯತೆಗಳಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.