ತಂದೆಯ ಸಾವಿನ ನಡುವೆಯೂ ಎಸ್’ಎಸ್’ಎಲ್’ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ
ತಂದೆಯ ಸಾವಿನಲ್ಲೂ, ನೋವಿನ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಎಕ್ಸಾಮ್ ಬರೆದಿರುವ ಘಟನೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು (ಏ. 02): ತಂದೆಯ ಸಾವಿನಲ್ಲೂ, ನೋವಿನ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಎಕ್ಸಾಮ್ ಬರೆದಿರುವ ಘಟನೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿಯಲ್ಲಿ ನಡೆದಿದೆ.
ಇಂದು ಮುಂಜಾನೆ ದರ್ಶಿನಿ ತಂದೆ ತ್ಯಾಗರಾಜು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಂದು ಎಸ್’ಎಸ್’ಎಲ್’ಸಿ ವಿಜ್ಞಾನ ಪರೀಕ್ಷೆ ಇದ್ದಿದ್ದರಿಂದ ದರ್ಶಿನಿ ಎಕ್ಸಾಂ ಬರೆಯಬೇಕಾಗಿತ್ತು. ಕೊನೆಗೂ ತಂದೆಯ ಸಾವಿನ ನೋವಿನಲ್ಲೂ ದರ್ಶಿನಿ ಎಕ್ಸಾಂ ಬರೆದಿದ್ದಾಳೆ.