ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್​ಐಟಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ.

ಬೆಂಗಳೂರು (ಸೆ.25): ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್​ಐಟಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ.

ಸ್ಥಳೀಯ ರೌಡಿಗಳು ಗೌರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಲ್ಲಿ ಇಂದು ಜೈಲಿನಲ್ಲಿರೋ ಹಾಲಿ ರೌಡಿ ಟಿಬೇಟ್​​ ಬಾಲಾಜಿ ಮತ್ತು ಸಹಚರರನ್ನ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗೌರಿ ಹತ್ಯೆಯಾದ ದಿನದಂದು ರೌಡಿ ಟಿಬೇಟ್​​ ಬಾಲಾಜಿ ಸಹಚರರ ಮೊಬೈಲ್ ​​ ನೆಟ್​​ವರ್ಕ್​​ ಆರ್​​ ಆರ್​ ನಗರ ಮತ್ತು ಹೆಬ್ಬಾಳ ದ ಸುತ್ತಮುತ್ತ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆಯಲ್ಲಿ ಟಿಬೇಟ್​​ ಬಾಲಾಜಿ ಮತ್ತು ಸಹಚರರ ಕೈವಾಡವೇನಾದರೂ ಇದೆಯಾ ಎಂದು ಶಂಕಿಸಿ ಎಸ್​ಐಟಿ ಅಧಿಕಾರಿಗಳು ಬಾಲಾಜಿ ಮತ್ತು ಸಹಚರರನ್ನ ವಿಚಾರಣೆ ಮಾಡಿದ್ದಾರೆ.