ಬೆಂಗಳೂರು (ಸೆ.30): ಆನೇಕಲ್ ನ‌ ಜೆಡಿಎಸ್ ಎಂಎಲ್ಸಿ ಸಿ.ಆರ್. ಮನೋಹರ್ ವಿರುದ್ದ ಜಗದೀಶ್ ಶೆಟ್ಟರ್ ಭೂ ಅಕ್ರಮ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಇದಕ್ಕೆ ಪ್ರತಿಕ್ರಿಯಿಸಿರುವ ಮನೋಹರ್, ಪ್ರಕರಣ ಕುರಿತು ಸಂಪೂರ್ಣ ದಾಖಲೆಗಳ ಮಾಹಿತಿ ಪಡೆದು ಶೆಟ್ಟರ್ ಆರೋಪ ಮಾಡಲಿ.ಅವರಿಗೆ ಮಾಹಿತಿ ಕೊರತೆ ಇದೆ. ಬೇಕಿದ್ದರೆ ನಾನೇ ಖುದ್ದು ದಾಖಲೆಗಳನ್ನು ಅವರಿಗೆ ಒದಗಿಸುತ್ತೇನೆ ಎಂದು ಹೇಳಿದ್ದಾರೆ.

ನಂತರವೂ ರಾಜಕೀಯ ಕಾರಣಗಳಿಗೆ ಈ ವಿಷಯವನ್ನು ಬೆಳೆಸಿದರೆ ಮಾನನಷ್ಡ ಮೊಕದ್ದಮೆ ದಾಖಲಿಸುತ್ತೇನೆ. ಡಿಸಿ ಶಂಕರ್ ಅವರೇ ಕ್ಲೀನ್ ಚಿಟ್ ನೀಡಿದ್ದಾರೆ. ಸಿಬಿಐ ತನಿಖೆ ಎದುರಿಸಲೂ ಸಿದ್ಧ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಪ್ರಕರಣದಲ್ಲಿ ಅಕ್ರಮವೆಸಗಿರುವ ಕುರಿತು ನನ್ನ ವಿರುದ್ಧ ದಾಖಲೆಯಿದ್ರೆ ಬಿಡುಗಡೆಗೊಳಿಸಲಿ. ಗೌರವ ಸ್ಥಾನದಲ್ಲಿರುವ ಶೆಟ್ಟರ್ ಈ ರೀತಿ ಶಾಸಕರೊಬ್ಬರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ

ಕಾನೂನು ಪ್ರಕಾರ ಜಮೀನು ಖರೀದಿಸಿದ್ದೇನೆ ಎಂದು ಮನೋಹರ್ ಹೇಳಿದ್ದಾರೆ.