ಗುಜರಾತ್‌ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿರುವ ರಜನೀಶ್‌ ರಾಯ್‌ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್‌ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ರಜನೀಶ್ ರಾಯ್ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್ ಸಿಆರ್ಪಿಎಫ್ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಸ್ಸಾಂನ ಸಿಮಾಲ್ಗುರಿ ಎಂಬಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಸೋಂಗಬ್ಜಿತ್ (ಎನ್ಡಿಎಫ್ಬಿ-ಎಸ್) ಬಣದ ಇಬ್ಬರು ಶಂಕಿತ ಉಗ್ರರನ್ನು ಮಾ 29-30ರಂದು ಅವರಿದ್ದ ಡಿ-ಕಲಿಂಗ್ ಗ್ರಾಮದಿಂದ ಬಂಧಿಸಿ, ನಿಶ್ಶಸ್ತ್ರರಾಗಿದ್ದಾಗಲೇ ಈ ಪಡೆಗಳು ಸಾಯಿಸಿವೆ. ಬಳಿಕ ಇದಕ್ಕೆ ಎನ್ಕೌಂಟರ್ ಮಾಡಲಾಗಿದೆ ಬಣ್ಣ ಕಟ್ಟಲಾಗಿದೆ. ಸುಖಾಸುಮ್ಮನೇ ಶಂಕಿತ ಉಗ್ರರ ಶವದ ಮೇಲೆ ಬಂದೂಕು ಇರಿಸಿ ಅವರು ಭದ್ರತಾಪಡೆಗಳ ಮೇಲೆ ದಾಳಿ ಮಾಡಲು ಬಂದಿದ್ದರು ಎಂದು ಬಿಂಬಿಸಲಾಗಿದೆ.
ಈ ಬಗ್ಗೆ ತನಿಖೆ ಆಗಬೇಕು ಎಂದು ರಜನೀಶ್ ರಾಯ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
