ಗುಜರಾತ್‌ ಕೇಡರ್‌ ಐಪಿಎಸ್‌ ಅಧಿ​ಕಾರಿ​ಯಾಗಿರುವ ರಜನೀಶ್‌ ರಾಯ್‌ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್‌ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವ​ಹಿಸುತ್ತಿದ್ದಾರೆ.

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಹಿರಿಯ ಅಧಿಕಾರಿ​ಯೊಬ್ಬರು, ‘ಸೇನೆ, ಪೊಲೀಸರು ಹಾಗೂ ಸಿಆರ್‌ಪಿಎಫ್‌ ಪಡೆಗಳು ಅಸ್ಸಾಂನಲ್ಲಿ ನಕಲಿ ಎನ್‌ಕೌಂಟರ್‌ ನಡೆಸಿದ್ದವು' ಎಂಬ ಸ್ಫೋಟಕ ವರದಿಯನ್ನು ಸಿಆರ್‌ಪಿಎಫ್‌ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. ಇದು ಭಾರೀ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಗುಜರಾತ್‌ ಕೇಡರ್‌ ಐಪಿಎಸ್‌ ಅಧಿ​ಕಾರಿ​ಯಾಗಿರುವ ರಜನೀಶ್‌ ರಾಯ್‌ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್‌ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವ​ಹಿಸುತ್ತಿದ್ದಾರೆ.

ಅಸ್ಸಾಂನ ಸಿಮಾಲ್‌ಗುರಿ ಎಂಬಲ್ಲಿ ನ್ಯಾಷನಲ್‌ ಡೆಮಾಕ್ರೆಟಿಕ್‌ ಫ್ರಂಟ್‌ ಆಫ್‌ ಬೋಡೋಲ್ಯಾಂಡ್‌ ಸೋಂಗಬ್ಜಿತ್‌ (ಎನ್‌ಡಿಎಫ್‌ಬಿ-ಎಸ್‌) ಬಣದ ಇಬ್ಬರು ಶಂಕಿತ ಉಗ್ರರನ್ನು ಮಾ 29-30ರಂದು ಅವರಿದ್ದ ಡಿ-ಕಲಿಂಗ್‌ ಗ್ರಾಮದಿಂದ ಬಂಧಿಸಿ, ನಿಶ್ಶಸ್ತ್ರರಾಗಿದ್ದಾಗಲೇ ಈ ಪಡೆಗಳು ಸಾಯಿಸಿವೆ. ಬಳಿಕ ಇದಕ್ಕೆ ಎನ್‌ಕೌಂಟರ್‌ ಮಾಡಲಾಗಿದೆ ಬಣ್ಣ ಕಟ್ಟಲಾಗಿದೆ. ಸುಖಾಸುಮ್ಮನೇ ಶಂಕಿತ ಉಗ್ರರ ಶವದ ಮೇಲೆ ಬಂದೂಕು ಇರಿಸಿ ಅವರು ಭದ್ರತಾಪಡೆಗಳ ಮೇಲೆ ದಾಳಿ ಮಾಡಲು ಬಂದಿದ್ದರು ಎಂದು ಬಿಂಬಿಸಲಾಗಿದೆ.

ಈ ಬಗ್ಗೆ ತನಿಖೆ ಆಗಬೇಕು ಎಂದು ರಜನೀಶ್‌ ರಾಯ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

(ಸಾಂದರ್ಭಿಕ ಚಿತ್ರ)