ಅಕ್ಟೋಬರ್ 16ರಂದು ನಡೆದಿದ್ದ ರುದ್ರೇಶ್ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.
ಬೆಂಗಳೂರು(ಸೆ.12): ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶ ನಡೆಯುತ್ತಿದೆ.
ಈ ಪ್ರತಿರೋಧ ಸಮಾವೇಶದಲ್ಲಿ SDPI ಪಕ್ಷ ಕೂಡಾ ಭಾಗಿಯಾಗಿದೆ. ಆದರೆ SDPI (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಪಕ್ಷದ ಮೇಲೆ ರುದ್ರೇಶ್ ಹತ್ಯೆ ಪ್ರಕರಣದ ಆರೋಪ ಇದೆ.
ಅಕ್ಟೋಬರ್ 16ರಂದು ನಡೆದಿದ್ದ ರುದ್ರೇಶ್ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಆರೋಪವಿರುವ ಪಕ್ಷ, ಗೌರಿ ಲಂಕೇಶ್ ಹತ್ಯೆಯ ನ್ಯಾಯಕ್ಕಾಗಿ, ಸಮಾವೇಶದಲ್ಲಿ ಪಾಲ್ಗೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.
