Asianet Suvarna News Asianet Suvarna News

ಮೇವು ಹಗರಣ: ಲಾಲೂಗೆ ಜಾಮೀನು ನಿರಾಕರಿಸಿದ ಸುಪ್ರೀಂ!

ಬಹುಕೋಟಿ ಮೇವು ಹಗರಣದ ಪ್ರಕರಣ| ಲಾಲೂ ಪ್ರಸಾದ್ ಯಾದವ್ ಗೆ ಜಾಮೀನು ನಿರಾಕರಣೆ| ಜಾಮೀನು ಮಂಜೂರು ಮಾಡಲು ಸ್ಪಷ್ಟವಾಗಿ ನಿರಾಕರಿಸಿದ ಸುಪ್ರೀಂ ಕೋರ್ಟ್| ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಂಜನ್ ಗಗೋಯ್ ನೇತೃತ್ವದ ಪೀಠ| ಲಾಲೂ ಪರ ಕಪಿಲ್ ಸಿಬಲ್ ವಾದ ಮಂಡನೆ| 

SC Refuses To Grant Bail For Lalu Prasad Yadav On Fodder Scam
Author
Bengaluru, First Published Apr 10, 2019, 1:29 PM IST

ನವದೆಹಲಿ(ಏ.10): ಬಹುಕೋಟಿ ಮೇವು ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ನ್ಯಾಯುಪೀಠ,  ಲಾಲೂಗೆ ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.

ಲಾಲೂ ಪರ ವಾದ ಮಂಡಿಸಿದ ವಕೀಲ್ ಕಪಿಲ್ ಸಿಬಲ್, ಪ್ರಕರಣ ಸಂಬಂಧ ಯಾವುದೇ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿಲ್ಲ, ಪಿತೂರಿಯಿಂದಾಗಿ ಅವರಿಗೆ ಜೈಲು ಶಿಕ್ಷೆಯಾಗಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. 

 

ಆದರೆ ಸಿಬಲ್ ವಾದ ಒಪ್ಪದ ಕೋರ್ಟ್, ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ನಿನ್ನೆಯಷ್ಟೇ ಲಾಲೂಗೆ ಜಾಮೀನು ನೀಡಕೂಡದು ಎಂದು ಸಿಬಿಐ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios