Asianet Suvarna News Asianet Suvarna News

ಮಧ್ಯಪ್ರದೇಶ ಜಡ್ಜ್‌ ಸತೀಶ್‌ ಚಂದ್ರ ಶರ್ಮಾ ಕರ್ನಾಟಕ ಹೈಕೋರ್ಟ್‌ಗೆ

ಕೇಂದ್ರ ಕಾನೂನು ಸಚಿವಾಲಯ ನೂತನ ಅಧಿಸೂಚನೆ ಪ್ರಕಟಿಸಿದ್ದು, ಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶ ಸತೀಶ್‌ ಚಂದ್ರ ಶರ್ಮಾ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾದೀಶರಾಗಿ ವರ್ಗಾವಣೆಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Satish Chandra Sharma new karnataka High court Judge kvn
Author
New Delhi, First Published Jan 1, 2021, 2:13 PM IST

ನವದೆಹಲಿ(ಜ.01): ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶ ಸತೀಶ್‌ ಚಂದ್ರ ಶರ್ಮಾ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ವರ್ಗಾವಣೆಯಾಗಿದ್ದಾರೆ. 

ಇದೇ ವೇಳೆ ಈವರೆಗೆ ಆಂಧ್ರಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದ ಜಿತೇಂದ್ರ ಕುಮಾರ್‌ ಮಹೇಶ್ವರಿ ಅವರನ್ನು ಸಿಕ್ಕಿಂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಮತ್ತೊಂದೆಡೆ ಸಿಕ್ಕಿಂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅರೂಪ್‌ ಕುಮಾರ್‌ ಗೋಸ್ವಾಮಿ ಅವರನ್ನು ಅಂಧ್ರಪ್ರದೇಶ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನಿಯೋಜಿಸಲಾಗಿದೆ. 

ಸುಪ್ರೀಂಕೋರ್ಟ್‌ ಕೊಲಿಜಿಯಂ ಇತ್ತೀಚೆಗೆ ಮಾಡಿದ್ದ ಶಿಫಾರಸಿನ ಮೇರೆಗೆ ಕೇಂದ್ರ ಕಾನೂನು ಸಚಿವಾಲಯ ಈ ಸಂಬಂಧ ಗುರುವಾರ ಅಧಿಸೂಚನೆಗಳನ್ನು ಹೊರಡಿಸಿದೆ.

ಗೋವು ಕಳ್ಳಸಾಗಣೆ: ಮಮತಾ ಅಳಿಯನ ಆಪ್ತಗೆ ಸಿಬಿಐ ಸಮನ್ಸ್‌

ನವದೆಹಲಿ: ಗೋವು ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ಜನವರಿ 4ರಂದು ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಯ ಆಪ್ತ ಎಂದೇ ಹೇಳಲಾಗುವ ವಿನಯ್‌ ಮಿಶ್ರಾಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ. 

ಇದಕ್ಕೂ ಮೊದಲು ಮಿಶ್ರಾ ಪತ್ತೆಗಾಗಿ ಸಿಬಿಐ ಎರಡು ಕರೆ ಶೋಧ ಕಾರಾರ‍ಯಚರಣೆ ಕೈಗೊಂಡಿತ್ತು. ಆದರೆ ಮಿಶ್ರಾ ಪತ್ತೆಯಾಗಿರಲಿಲ್ಲ. ಹೀಗಾಗಿ ಜ.4ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದೆ. ಮಿಶ್ರಾ ದೇಶ ಬಿಟ್ಟು ಹೋಗದಂತೆ ಸಿಬಿಐ ಸುತ್ತೋಲೆಯನ್ನೂ ಹೊರಡಿಸಿದೆ. 

ಗೋವು ಕಳ್ಳಸಾಗಾಣಿಕೆ ಪ್ರಕರಣದ ಕಿಂಗ್‌ಪಿನ್‌ ಎನಾಮುಲ್‌ ಹಕಿ ಎಂಬಾತನನ್ನು ಕಳೆದ ನ.6ರಂದು ಸಿಬಿಐ ಬಂಧಿಸಿತ್ತು. ಇದೇ ಪ್ರಕರಣ ಸಂಬಂಧ ಬಿಎಸ್‌ಎಫ್‌ ಮಾಜಿ ಕಮಾಂಡರ್‌ ಸತೀಶ್‌ ಕುಮಾರ್‌ನನ್ನೂ ಸಿಬಿಐ ವಶಕ್ಕೆ ಪಡೆದಿತ್ತು.

Follow Us:
Download App:
  • android
  • ios