ರಾಜ್ಯ ರಾಜಕಾರಣಕ್ಕೆ ಕಾವಿಧಾರಿಗಳ ಎಂಟ್ರಿ!
ಹೀಗೆ ಮುಂದುವರೆದರೆ ನಾವು ಸುಮ್ಮನೆ ಬಿಡುವುದಿಲ್ಲ
ಕ್ಯಾಬಿನೆಟ್ ನಲ್ಲಿ ಕುರುಬರಿಗೆ ಸೂಕ್ತ ಸಚಿವ ಸ್ಥಾನ ಸಿಕ್ಕಿಲ್ಲ
ಸಿದ್ದರಾಮಯ್ಯ ಪರ ಕಾಗಿನೆಲೆ ಶ್ರೀ ಬ್ಯಾಟಿಂಗ್
ಸಿಎಂ ಕುಮಾರಸ್ವಾಮಿ ವಿರುದ್ಧ ಕಾಗಿನೆಲೆ ಶ್ರೀ ವಾಗ್ದಾಳಿ
ಕುರುಬ ಸಮುದಾಯದ ಅಧಿಕಾರಿಗಳೇ ಟಾರ್ಗೆಟ್
ಬೆಂಗಳೂರು(ಜೂ,29): ರಾಜ್ಯ ರಾಜಕಾರಣಕ್ಕೆ ಕಾವಿಧಾರಿಗಳ ಎಂಟ್ರಿ ಆಗಿದೆ. ಒಂದೊಂದು ಸಮಾಜದ ಸ್ವಾಮಿಜೀಗಳು ತಮ್ಮ ಸಮಾಜದ ರಾಜಕಾರಣಿಗಳ ಪರ ಹೇಳಿಕೆ ನೀಡುತ್ತಿದ್ದಾರೆ. ನಂಜಾವಧೂತ ಶ್ರೀಗಳು ಎಚ್ಡಿಕೆ ಪರ ಬ್ಯಾಟಿಂಗ್ ಮಾಡಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ನಿರ್ಲಕ್ಷ್ಯ ಮಾಡಿದ್ರೆ ಲೋಕಾಸಭೆ ಚುನಾವಣೆಯಲ್ಲಿ 15 ಸೀಟೂ ಗೆಲ್ಲಲ್ಲ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಟಗರು ಪದ ಬಳಸಿ ವಿರೋಧಿಗಳಿಹೆ ಎಚ್ಚರಿಕೆ ನೀಡಿದ ಅವರು, ಟಗರು ಹಿಂದಕ್ಕೆ ಹೋಗಿದೆ ಅಂದರೆ, ಮುಂದಿನ ಹೆಜ್ಜೆ ಇಡಲು ರೆಡಿಯಾಗ್ತಿದೆ ಎಂದರ್ಥ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..