Asianet Suvarna News Asianet Suvarna News

ಮೈಸೂರು ವಿವಿಗೆ ಅಶೋಕ್‌ ಬೇಡ: ರಾಜ್ಯಪಾಲರಿಗೆ ದೂರು

ಅಶೋಕ್‌ ಕುಮಾರ್‌ ಅವರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.

RTI Acivists Wites to Guv Urges Not to Appoint Ashok Kumar as VC

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಎನ್‌.ಎಸ್‌.ಅಶೋಕ್‌ ಕುಮಾರ್‌ ಅವರನ್ನು ಪರಿಗಣಿಸದಂತೆ ಆರ್‌ಟಿಐ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಮೈಸೂರು ವಿವಿ ಶೋಧನಾ ಸಮಿತಿಯು ಈ ಬಗ್ಗೆ ಸಭೆ ನಡೆಸುವ ಮೊದಲೇ ರಾಜ್ಯಪಾಲರಿಗೆ ದೂರು ಸಲ್ಲಿಕೆ​ಯಾಗಿದೆ. ಅಶೋಕ್‌ ಕುಮಾರ್‌ ಅವರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.

ಈ ಸಂಬಂಧ ಅಶೋಕ್‌ ಕುಮಾರ್‌ ವಿರುದ್ಧ ತಿಲಕ ನಗರದ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸು ದಾಖಲಾಗಿತ್ತು.

Follow Us:
Download App:
  • android
  • ios