ಮೈಸೂರು ವಿವಿಗೆ ಅಶೋಕ್ ಬೇಡ: ರಾಜ್ಯಪಾಲರಿಗೆ ದೂರು
ಅಶೋಕ್ ಕುಮಾರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.
ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಎನ್.ಎಸ್.ಅಶೋಕ್ ಕುಮಾರ್ ಅವರನ್ನು ಪರಿಗಣಿಸದಂತೆ ಆರ್ಟಿಐ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಮೈಸೂರು ವಿವಿ ಶೋಧನಾ ಸಮಿತಿಯು ಈ ಬಗ್ಗೆ ಸಭೆ ನಡೆಸುವ ಮೊದಲೇ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಅಶೋಕ್ ಕುಮಾರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.
ಈ ಸಂಬಂಧ ಅಶೋಕ್ ಕುಮಾರ್ ವಿರುದ್ಧ ತಿಲಕ ನಗರದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿತ್ತು.