ಹತ್ಯೆಗೀಡಾದ ರೌಡಿಶೀಟರ್​ ಗಣೇಶ್​,​ ಕುಳ್ಳ ಸೀನನ ಸಹಚರ. ಹಳೆವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರು(ಅ.23): ಬೆಂಗಳೂರಿನಲ್ಲಿ ಹಾಡಹಗಲೇ ರಕ್ತ ಹರಿದಿದೆ. ಸುಬ್ರಹ್ಮಣ್ಯಪುರದ ವಿನಾಯಕ ಟಾಕೀಸ್​​ ಬಳಿ ರೌಡಿಶೀಟರ್​​ ಗಣೇಶ್ ಎಣಬುವವನನ್ನ ಬರ್ಬರ ಹತ್ಯೆ ಮಾಡಲಾಗಿದೆ.

ಹತ್ಯೆಗೀಡಾದ ರೌಡಿಶೀಟರ್​ ಗಣೇಶ್​,​ ಕುಳ್ಳ ಸೀನನ ಸಹಚರ. ಹಳೆವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸದ್ಯ ರೌಡಿ ಶೀಟರ್ ಕುಳ್ಳ ಸೀನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.