Asianet Suvarna News Asianet Suvarna News

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ : ಭೀಕರ ಅಪಘಾತದಲ್ಲಿ 18 ಜನ ದುರ್ಮರಣ

ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಖಂಡಾಲ ಘಾಟ್ ಪ್ರದೇಶದಲ್ಲಿ  ಭೀಕರ ಅಪಘಾತ ಸಂಭವಿಸಿದೆ.

Road Accident In Maharashtra

ಖಂಡಾಲ : ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಖಂಡಾಲ ಘಾಟ್ ಪ್ರದೇಶದಲ್ಲಿ  ಭೀಕರ ಅಪಘಾತ ಸಂಭವಿಸಿದೆ.

35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಟ್ರಕ್ ಉರುಳಿ ಬಿದ್ದಿದ್ದು, ಈ ವೇಳೆ ಸ್ಥಳದಲ್ಲೇ 18 ಜನ ದುರ್ಮರಣವನ್ನಪ್ಪಿದ್ದಾರೆ.

ಮೂವರು ಮಕ್ಕಳು ಸೇರಿ ಒಟ್ಟು 18 ಜನ ಅಪಘಾತದಲ್ಲಿ ಸಾವಿ ಗೀಡಾಗಿದ್ದಾರೆ. ಮೃತರು ಕರ್ನಾಟಕದ ವಿಜಯಪುರದ ತಿಕೋಟಾ ನಿವಾಸಿಗಳು ಎನ್ನಲಾಗಿದೆ.    

ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದೇ ವೇಳೆ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow Us:
Download App:
  • android
  • ios