ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬುದು ಜಗಜ್ಜಾಹೀರವಾದ ಮಾತು. ಆದರೆ ರಾಜೀನಾಮೆ ಕೊಟ್ಟ ಎಲ್ಲ ಶಾಸಕರು ಮುಂಬೈನಲ್ಲಿ ಇಲ್ಲ. ಒಂದು ಸುದ್ದಿ ಕಾರವಾರದಿಂದ ಬ್ರೇಕ್ ಆಗಿದೆ.

ಕಾರವಾರ[ಜು. 13]  ರಾಜೀನಾಮೆ ಪರ್ವ ಆರಂಭ ಮಾಡಿದ್ದ ಅತೃಪ್ತ ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ? ಮುಂಬೈಗೆ ಹೋಗಿಲ್ಲ.

Add Asianetnews Kannada as a Preferred SourcegooglePreferred

ಕಳೆದ ಎರಡು ದಿನಗಳಿಂದ ಗೋವಾದಲ್ಲಿದ್ದ ಆನಂದ್ ಸಿಂಗ್ ಗುಟ್ಟಾಗಿ ಕಾರವಾರಕ್ಕೆ ಬಂದು ಹೋಗಿದ್ದಾರೆ. ಮಾಜಿ ಶಾಸಕ ಸತೀಶ ಸೈಲ್ ಜತೆ ಮಾತುಕತೆ ನಡೆಸಿ ಆನಂದ್ ಸಿಂಗ್ ತೆರಳಿದ್ದಾರೆ.

ಡಿಕೆಶಿಗೆ ಮೊಬೈಲ್ ಕರೆ ಮಾಡಿ ಆನಂದ ಸಿಂಗ್ ಗೆ ನೀಡಲು ಮುಂದಾಗಿದ್ದ ಸೈಲ್ ನೀಡಲು ಮುಂದಾಗಿದ್ದರು ಎನ್ನಲಾಗಿದ್ದು ಆನಂದ್ ಸಿಂಗ್ ಇದಕ್ಕೆ ಒಪ್ಪಿಕೊಂಡಿಲ್ಲ. ಇದಾದ ಮೇಲೆ ಆನಂದ್ ಸಿಂಗ್ ಹೊಸಪೇಟೆ ಕಡೆ ಪ್ರಯಾಣ ಬೆಳೆಸಿದ್ದಾರೆ.