Asianet Suvarna News Asianet Suvarna News

ಹೈನುಗಾರಿಕೆಗೆ ಮಾರಕವಾಗುತ್ತಾ ಕೇಂದ್ರ ಯೋಜನೆ?

RCEP ಯೋಜನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
 

RCEP deal would hurt dairy sector in India
Author
Bengaluru, First Published Nov 2, 2019, 10:28 AM IST

ವಡೋದರ [ನ.02]: ಆಸಿಯಾನ್ ರಾಷ್ಟ್ರಗಳ ಒಕ್ಕೂಟದಿಂದ ಪ್ರಸ್ತಾಪಿತ ಸಮಗ್ರ ಪ್ರಾದೇಶಿಕ ಆರ್ಥಿಕ ಪಾಲುಗಾರಿಕೆ (ಆರ್ ಸಿಇಪಿ) ಯೋಜನೆ ಹೈನೋದ್ಯಮಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳು ವಿರೋಧ ವ್ಯಕ್ತ ಪಡಿಸಿವೆ. 

ಇದರ ಬೆನ್ನಲ್ಲೇ, ಈ ಯೋಜನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಆಗ ಡಬ್ಲ್ಯುಟಿಒ-ಗ್ಯಾಟ್‌ ಒಪ್ಪಂದ, ಈಗ ಆರ್‌ಸಿಇಪಿ ಒಪ್ಪಂದ: ಏನಿದು ಮುಕ್ತ ವ್ಯಾಪಾರದ ಗುಮ್ಮ?...

ಗುರುವಾರ ಗುಜರಾತ್‌ನ ಆನಂದ್‌ನಲ್ಲಿ ನಡೆದ ಅಮೂಲ್‌ನ 74 ನೇ ಸಂಸ್ಥಾಪನಾ ದಿನದಂದು ಮುಖ್ಯ ಅತಿಥಿಯಾಗಿ ಬಂದಿದ್ದ ಗೋಯಲ್‌ಗೆ,  ಆರ್‌ಸಿಇಪಿ ಜಾರಿ ಮಾಡಬಾರದು ಎಂದು ರೈತರು ಮನವಿ ಸಲ್ಲಿಸಿದ್ದರು.

ಈ ವೇಳೆ ದೇಶದ ಹೈನುಗಾರಿಕೆಗೆ ತೊಂದರೆಯಾಗುವ ಯಾವ ನಿರ್ಧಾರವನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಹೇಳಿದ್ದಾರೆ.

Follow Us:
Download App:
  • android
  • ios