Asianet Suvarna News Asianet Suvarna News

ಶೋ ಮಾಡೋದು ಬಿಟ್ಟು ಡಿಕೆಶಿ ಕೆಲಸ ಮಾಡಲಿ : ಜಾರಕಿಹೊಳಿ ಗರಂ

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಗರಂ ಆಗಿದ್ದಾರೆ. ಅವರು ಶೋ ಮಾಡೋದನ್ನು ಬಿಟ್ಟು ಕೆಲಸ ಮಾಡಲಿ ಎಂದು ಹೇಳಿದ್ದಾರೆ. 

Ramesh Jarkiholi Slams DK Shivakumar
Author
Bengaluru, First Published Oct 22, 2018, 7:39 AM IST

ಬಳ್ಳಾರಿ : ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಇದೀಗ ಮತ್ತೆ ಹರಿಹಾಯ್ದಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್ ಅವರು ಶೋ ಮಾಡೋದು ಬಿಟ್ಟು ಕೆಲಸ ಮಾಡಿದರೆ ಒಳಿತು’ ನೇರ ವಾಗ್ದಾಳಿ ನಡೆಸಿದ್ದಾರೆ. 

ಜಿಲ್ಲೆಯ ಕೂಡ್ಲಿಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಿಂಗಾಯತ ಧರ್ಮದ ಕುರಿತು ಡಿ.ಕೆ. ಶಿವಕುಮಾರ್ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ . ಆದರೆ, ಈ ಬಗ್ಗೆ ಆಕ್ಷೇಪ ಇದ್ದಿದ್ದರೆ ಸಚಿವ ಸಂಪುಟ ಸಭೆಯಲ್ಲಿಯೇ ಚರ್ಚೆ ಮಾಡಬಹುದಿತ್ತಲ್ಲವೇ? ಯಾಕೆ ಮೌನ ವಹಿಸಿದ್ದರು? ಇದೀಗ ಬಹಿರಂಗ ಹೇಳಿಕೆ ನೀಡುವ ಉದ್ದೇಶವೇನು? ಅವರ ಹಿಂಬಾಲಕರಾದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡು ವಾಗ ಡಿ.ಕೆ. ಶಿವಕುಮಾರ್ ಎಲ್ಲಿಗೆ ಹೋಗಿದ್ದರು? ಪ್ರತಿ ಸಭೆಯಲ್ಲಿ ಮಾತನಾಡಿದರೂ ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು. 

ಅಲ್ಲದೆ, ಲಿಂಗಾಯತ ಧರ್ಮದ ವಿಚಾರ ಕುರಿತು ಸಂಪುಟ ಸಭೆಗಳಲ್ಲಿ ಅಂದು ಸಚಿವರಾಗಿದ್ದ ಈಶ್ವರ ಖಂಡ್ರೆ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರು ಮಾತ್ರ ಪರ ವಿರೋಧವಾಗಿ ಚರ್ಚಿಸಿದರೆ ವಿನಃ ಇವರೇಕೆ (ಡಿಕೆಶಿ) ಮೌನವಾಗಿದ್ದರು? ಎಂದು ಕೇಳಿದರು. ಪ್ರತ್ಯೇಕ ಧರ್ಮದ ಹೇಳಿಕೆಯನ್ನು ನಾವು ಪರಿಗಣಿಸಿದ್ದೇವೆ ಅಷ್ಟೇ. ಈ ವಿಚಾರದಲ್ಲಿ ಎಂ.ಬಿ.ಪಾಟೀಲ್ ಅವರಿಗೆ ನಮ್ಮ ಬೆಂಬಲವಿದೆ ಎಂದರು.

ನಾಗೇಂದ್ರಗೆ ಟಿಕೆಟ್ ತಪ್ಪಲು ಕುಮಾರಸ್ವಾಮಿ ಕಾರಣರಲ್ಲ: ಶಾಸಕ ಬಿ. ನಾಗೇಂದ್ರ ಅವರ ಸಹೋದರನಿಗೆ ಟಿಕೆಟ್ ತಪ್ಪಲು ಎಚ್.ಡಿ. ಕುಮಾರಸ್ವಾಮಿ ಅವರು ಕಾರಣರಲ್ಲ. ಯಾವ ಕುತಂತ್ರದಿಂದ ಕೈ ತಪ್ಪಿದೆಯೋ ಗೊತ್ತಿಲ್ಲ ಎಂದರು.

Follow Us:
Download App:
  • android
  • ios