Asianet Suvarna News Asianet Suvarna News

ಶ್ರದ್ಧಾಂಜಲಿ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ಟಿಕೆಟ್ ಕಲೆಕ್ಟರ್ ಅರೆಸ್ಟ್

ಪುಲ್ವಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 44 ಯೊಧರು ವೀರ ಮರಣವನ್ನಪ್ಪಿದ್ದು, ಈ ಘಟನೆಗೆ ಇಡೀ ರಾಷ್ಟ್ರವೇ ಕಂಬನಿ ಮಿಡಯುತ್ತಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಓರ್ವ ಟಿಕೆಟ್ ಕಲೆಕ್ಟರ್ ಪಾಕಿಸ್ತಾನ ಜಿಂದಾಬಾದ್  ಎಂದು ಹೇಳಿ ಅರೆಸ್ಟ್ ಆಗಿದ್ದಾರೆ. 

Railway TC arrested for raising Pakistan Zindabad slogan
Author
Bengaluru, First Published Feb 16, 2019, 12:09 PM IST

ಅಲಿಗಢ : ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ಕೆಲವು  ವಿಕೃತ ಮನಸ್ಥಿತಿಗಳು ಇಂತಹ ಸಂದರ್ಭದಲ್ಲಿಯೂ ಕೂಡ ತಮ್ಮ ಕೊಂಕನ್ನು ಮುಂದುವರಿಸಿವೆ. 

ಇಲ್ಲಿನ ರೈಲು ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕಿರಿಯ ಟಿಕೆಟ್ ತಪಾಸಕ ಉಪೇಂದ್ರ ಕುಮಾರ ಬಹಾದ್ದೂರ್ ಸಿಂಗ್ (39) ಎಂಬಾತ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ.

ಈ ಹಿನ್ನೆಲೆಯಲ್ಲಿ ಅತನನ್ನು ದೇಶದ ಸಮಗ್ರತೆಗೆ ಧಕ್ಕೆ ತಂದ (153-ಬಿ) ಸೆಕ್ಷನ್ ಅಡಿ ಕೇಸು ಹಾಕಿ ಬಂಧಿಸಲಾಗಿದೆ.

Follow Us:
Download App:
  • android
  • ios