ಮೀನಿಗಾಗಿ ಹಾಕಿದದ್ದ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ,ಮತ್ತೇನು?
ಮಳೆಗಾಲ ಬಂದರೆ ಸಾಕು, ನದಿ, ಹಳ್ಳ, ಕೆರೆಗಳಿರೋ ಹಳ್ಳಿಗಳಲ್ಲಿ ಮೀನು ಹಿಡಿಯುವುದು ಸಾಮಾನ್ಯ. ಶಿವಮೊಗ್ಗದ ಆಲ್ಕೊಳದಲ್ಲಿ ಇದೇ ರೀತಿ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಲಾಗಿತ್ತು. ಮೀನಿನ ಆಸೆಯಿಂದ ಕೆರೆಗಿಳಿದಾಗಿ ಅಚ್ಚರಿ ಕಾದಿತ್ತು.
ಶಿವಮೊಗ್ಗ(ಜೂನ್.6): ಮಳೆಗಾಲದಲ್ಲಿ ಸಿಗೋ ಮೀನು ಬಹಳ ರುಚಿಕರ. ಇದಕ್ಕಾಗಿ ಹಳ್ಳಿಗಳಲ್ಲಿ ಮೀನಿಗಾಗಿ ಬಲೆ ಬೀಸೋದು ಸಾಮಾನ್ಯ. ಇದೇ ರೀತಿ ಮೀನಿನ ಆಸೆಯಿಂದ ಶಿವಮೊಗ್ಗದ ಆಲ್ಕೊಳದಲ್ಲಿ ಮೀನಿಗಾಗಿ ವ್ಯಕ್ತಿಯೊಬ್ಬರು ಬಲೆ ಹಾಕಿದ್ದರು. ಆದರೆ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ 6 ಅಡಿ ಗಾತ್ರದ ಹೆಬ್ಬಾವು.
ಕೆರೆಯಲ್ಲಿ ಮೀನಿಗಾಗಿ ಅಲ್ಕೊಳ ಗ್ರಾಮದ ರೈತ ಬಲೆ ಬೀಸಿದ್ದರು. ಮರುದಿನ ಬೆಳಗ್ಗೆ ಬಲೆಯಲ್ಲಿ ಸಿಕ್ಕಿರೋ ಮೀನುಗಳನ್ನ ತೆಗೆಯಲು ಕೆರೆಗೆ ಇಳಿದಾಗ ಅಚ್ಚರಿ ಕಾದಿತ್ತು. ಮೀನಿನ ಬದಲು 6 ಅಡಿ ಗಾತ್ರದ ಹೆಬ್ಬಾವು ಸಿಕ್ಕಿಹಾಕಿಕೊಂಡಿತ್ತು.
ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಕೆರೆಯ ಬಳಿ ಬಂದ ಸ್ನೇಕ್ ಕಿರಣ್ ಹೆಬ್ಬಾವನ್ನ ಬಲೆಯಿಂದ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.