ನಾನು ಇನ್ನೂ ಎರಡು ವರ್ಷ ಮಾತ್ರ ಸಚಿವನಾಗಿರುವೆ.  ಎರಡು ವರ್ಷದ ನಂತರ ಹನೂರು  ಶಾಸಕ ಆರ್. ನರೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು  ಚಾಮರಾಜನಗರದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ. 

ಚಾಮರಾಜನಗರ : ನಾನು ಇನ್ನೂ ಎರಡು ವರ್ಷ ಮಾತ್ರ ಸಚಿವನಾಗಿರುವೆ. ಎರಡು ವರ್ಷದ ನಂತರ ಹನೂರು ಶಾಸಕ ಆರ್. ನರೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಚಾಮರಾಜನಗರದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಚಾಮರಾಜನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಈ ಹೇಳಿಕೆ ನೀಡಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ ಎರಡು ವರ್ಷದ ನಂತರ ಸಚಿವ ಸ್ಥಾನ ಬಿಡಬೇಕು ಎಂದಿದ್ದಾರೆ. ನೀನು ಎರಡು ವರ್ಷ ಮಾತ್ರ ಮಂತ್ರಿಯಾಗಿ ನಂತರ ಸ್ಥಾನ ತ್ಯಜಿಸಬೇಕು ಎಂದು ಈ ಮೊದಲೇ ಅವರು ತಿಳಿಸಿದ್ದಾರೆ. ಅದರಂತೆ ಎರಡು ವರ್ಷ ಆದಮೇಲೆ ನರೇಂದ್ರಗೆ ಮಂತ್ರಿ ಸ್ಥಾನ ಬಿಟ್ಟುಕೊಡುತ್ತೇನೆ ಎಂದರು.