ಸರ್ಕಾರ ನೀಡಿದ್ದ ಬಂಗಲೆ ಖಾಲಿ ಮಾಡುವಂತೆ ಅಮರಿಂದರ್ ಸಿಂಗ್'ಗೆ ದೆಹಲಿ ಕೋರ್ಟ್ ಆದೇಶ
ಸಂಸದರಾಗಿದ್ದಾಗ ಸರ್ಕಾರದ ಕಡೆಯಿಂದ ನೀಡಲಾಗಿದ್ದ ಜನಪಥ್ ನಿವಾಸವನ್ನು ಖಾಲಿ ಮಾಡಬೇಕೆಂದು ದೆಹಲಿ ಹೈಕೋರ್ಟ್ ಪಂಜಾಬ್ ಸಿಎಂ ಅಮರಿಂದರ್ ಸಿಂಗ್’ಗೆ ಆದೇಶಿಸಿದೆ.
ನವದೆಹಲಿ (ಜೂ.02): ಸಂಸದರಾಗಿದ್ದಾಗ ಸರ್ಕಾರದ ಕಡೆಯಿಂದ ನೀಡಲಾಗಿದ್ದ ಜನಪಥ್ ನಿವಾಸವನ್ನು ಖಾಲಿ ಮಾಡಬೇಕೆಂದು ದೆಹಲಿ ಹೈಕೋರ್ಟ್ ಪಂಜಾಬ್ ಸಿಎಂ ಅಮರಿಂದರ್ ಸಿಂಗ್’ಗೆ ಆದೇಶಿಸಿದೆ.
ಅಮರಿಂದರ್ ಸಿಂಗ್ ಅನಧಿಕೃತ ನಿವಾಸಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇವರು ಸಂಸದರಾಗಿದ್ದಾಗ ಸರ್ಕಾರದ ವತಿಯಿಂದ ನಿವಾಸವನ್ನು ನೀಡಲಾಗಿತ್ತು. 2019 ರವರೆಗೆ ಇದರ ಕಾಲಾವಧಿಯಿದೆ. ಅಲ್ಲಿಯವರೆಗೆ ಮಾರುಕಟ್ಟೆ ದರದಲ್ಲಿ ಬಾಡಿಗೆ ನೀಡಬೇಕು ಎಂದು ಕೋರ್ಟ್ ಹೇಳಿದೆ.