ಚರಂಡಿಯೊಳಗಿಳಿದು ಸ್ವಚ್ಛಗೊಳಿಸಿದ ಸಿಎಂ ಸ್ವಾಮಿ
ಮಹಾತ್ಮ ಗಾಂಧಿ ಅವರ ಜಯಂತಿಗೆ ಮೋದಿ ಸರಕಾರ ಹಮ್ಮಿಕೊಂಡ ಸ್ವಚ್ಛ ಭಾರತದ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಪುದುಚೆರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಖುದ್ದು ಚರಂಡಿಯೊಳಗೆ ಇಳಿದು, ಕಟ್ಟಿದ ಕಸವನ್ನು ತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆ ಸಾಕಾರಕ್ಕಾಗಿ ಪಕ್ಷಬೇಧ ಮರೆತು ಬೆಂಬಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
#SwachhataHiSeva #SwachhBharat #SwachhBharatMission cleaning at #Nellithope #Puducherry pic.twitter.com/FkeKvfClZK
— V.Narayanasamy (@VNarayanasami) October 1, 2018
ಇದರ ಭಾಗವಾಗಿ ಗಾಂಧಿ ಜಯಂತಿಯಾದ ಮಂಗಳವಾರ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ತಮ್ಮ ಕೈಗೆ ಗ್ಲೋಸ್ ತೊಟ್ಟು, ಸಲಿಕೆ ಹಿಡಿದು ಚರಂಡಿ ದುರಸ್ತಿಗೊಳಿಸಿದ್ದಾರೆ. ಈ ವಿಡಿಯೋದಲ್ಲಿ ಬಿಳಿ ಅಂಗಿ, ಮೇಲೆತ್ತಿ ಕಟ್ಟಲಾಗಿರುವ ಬಿಳಿ ದೋತಿ ತೊಟ್ಟಿರುವ ಸಿಎಂ ನಾರಾಯಣಸ್ವಾಮಿ ಅವರು, ಹೊಲಸಿನಿಂದಾಗಿ ಕಂದು ಬಣ್ಣಕ್ಕೆ ತಿರುಗಿದ ಚರಂಡಿಯೊಳಕ್ಕೆ ಇಳಿದು, ಗಲೀಜನ್ನು ಸಲಿಕೆಯಲ್ಲಿ ಹೊರ ಹಾಕುತ್ತಿದ್ದಾರೆ.
ಪುದೆಚೆರಿಯಲ್ಲಿರುವ ಕನ್ನಡದ ಖ್ಯಾತ ನಿರ್ದೇಶಕಿ ಸುಮನಾ ಕಿತ್ತೂರು ಸಹ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದ್ದು, ಸದಾ ರಾಜ್ಯಪಾಲೆ ಕಿರಣ್ ಬೇಡಿ ಅವರೊಂದಿಗೆ ಕಾದಾಡಿ ಬಳಲುವ ಸ್ವಾಮಿಯ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.