ವಿದೇಶದಲ್ಲಿ ಕೆಲಸ ಖಾಲಿ ಇದೆ, ಸೂಪರ್​ವೈಸರ್​ ಕೆಲಸ ಇದೆ. ಪ್ರತೀ ತಿಂಗಳು ಲಕ್ಷ ಲಕ್ಷ ಹಣ ಗಳಿಸಬಹುದು ಎನ್ನುವ ಹಲವು ಟೋಪಿ ಜಾಹೀರಾತು ನೀವು ನೋಡಿರುತ್ತೀರಾ. ಇಂತಹುದೇ ಒಂದು ಸ್ಕೀಂ ಮಾಡಿ ಬೆಂಗಳೂರಿನ ಆನೆಕಲ್'​ನ ಆರೋಪಿ ಅಜಯ್​ ಕುಮಾರ್​ ಎಂಬಾತ 75 ಲಕ್ಷ ವಂಚಿಸಿದ್ದಾನೆ. ಕೆಜಿಎಫ್'​ನ ಸುಮಾರು 49 ಜನರಿಂದ ತಲಾ ಒಂದುವರೆ ಲಕ್ಷದಂತೆ ಟ್ರಾವೆಲ್ಸ್​ ಮಾಲೀಕನಿಂದ ಪಡೆದು ಪರಾರಿಯಾಗಿದ್ದಾನೆ. ಅಜಯ್'​ಗಾಗಿ 5 ತಿಂಗಳಿಂದ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಬಳಿಕ ಗೋವಾದಲ್ಲಿರುವುದು ದೃಡಪಟ್ಟಿತ್ತು. ಆದರಂತೆ ಪೊಲೀಸರ ಟೀಂ ಜೊತೆ ಜಂಬು ಪೊಲೀಸರು ಜೊತೆ ಹೋಗಿ ಅಜಯ್​ ಮನೆಗೆ ದಾಳಿ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ  ದಾಳಿಗೂ ಮುನ್ನ ಪೊಲೀಸ್​ ತಂಡದಲ್ಲಿದ್ದ ಹೆಡ್​ ಕಾನ್ಸ್'​ಟೇಬಲ್​ ಗೋಪಾಲ್ ಸಿಂಗ್ ತನ್ನ ಗೆಳೆಯರ ಜೊತೆ ಅರೋಪಿ ಮನೆಗೆ ಹೋಗಿ  ಅರೋಪಿಯಿಂದ ಚಿನ್ನಾಭರಣ, ಹಣ ಪಡೆದು ಅಜಯ್'​ನನ್ನು ಪಾರು ಮಾಡಿದ್ದಾರೆ. ಬಳಿಕ ತಮಗೇನು ಗೊತ್ತಿಲ್ಲ ರೀತಿ ಹೈಡ್ರಾಮಾ ಮಾಡಿ ವಾಪಸ್​ ಬಂದಿದ್ದಾರೆ. ಅನುಮಾನಗೊಂಡ ಜಂಬು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾನೆ. ಮತ್ತೆ ತನಿಖೆ ನಡೆಸಿದಾಗ ಹೆಡ್​ ಕಾನ್ಸ್​ಟೇಬಲ್​ ಕೃತ್ಯ ಬೆಳಕಿದೆ ಬಂದಿದೆ.

ಕೋಲಾರ(ಅ.14): ವಂಚಕನನ್ನು ಸೆರೆ ಹಿಡಿಯಲು ಹೋದ ಮುಖ್ಯಪೇದೆಯೇ ಕಂಬಿ ಹಿಂದೆ ಹೋಗಿದ್ದಾರೆ. ಸುಮಾರು 49 ಜನರಿಗೆ ಒಟ್ಟು 75 ಲಕ್ಷ ಹಣವನ್ನು ವಂಚಿಸಿದ ಕೇಸ್​ ಇದು. ಆರೋಪಿ ಎಸ್ಕೇಪ್ ಆಗಿದ್ದ. ಇದನ್ನು ಹಿಡಿಯಲು ಹೊರಟ ಪೊಲೀಸ್​ ಪೇದೆ ಅಂದರ್​ ಆಗಿದ್ದಾನೆ. ಅದ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ವಿದೇಶದಲ್ಲಿ ಕೆಲಸ ಖಾಲಿ ಇದೆ, ಸೂಪರ್​ವೈಸರ್​ ಕೆಲಸ ಇದೆ. ಪ್ರತೀ ತಿಂಗಳು ಲಕ್ಷ ಲಕ್ಷ ಹಣ ಗಳಿಸಬಹುದು ಎನ್ನುವ ಹಲವು ಟೋಪಿ ಜಾಹೀರಾತು ನೀವು ನೋಡಿರುತ್ತೀರಾ. ಇಂತಹುದೇ ಒಂದು ಸ್ಕೀಂ ಮಾಡಿ ಬೆಂಗಳೂರಿನ ಆನೆಕಲ್'​ನ ಆರೋಪಿ ಅಜಯ್​ ಕುಮಾರ್​ ಎಂಬಾತ 75 ಲಕ್ಷ ವಂಚಿಸಿದ್ದಾನೆ. ಕೆಜಿಎಫ್'​ನ ಸುಮಾರು 49 ಜನರಿಂದ ತಲಾ ಒಂದುವರೆ ಲಕ್ಷದಂತೆ ಟ್ರಾವೆಲ್ಸ್​ ಮಾಲೀಕನಿಂದ ಪಡೆದು ಪರಾರಿಯಾಗಿದ್ದಾನೆ.

ಅಜಯ್'​ಗಾಗಿ 5 ತಿಂಗಳಿಂದ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. ಬಳಿಕ ಗೋವಾದಲ್ಲಿರುವುದು ದೃಡಪಟ್ಟಿತ್ತು. ಆದರಂತೆ ಪೊಲೀಸರ ಟೀಂ ಜೊತೆ ಜಂಬು ಪೊಲೀಸರು ಜೊತೆ ಹೋಗಿ ಅಜಯ್​ ಮನೆಗೆ ದಾಳಿ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ದಾಳಿಗೂ ಮುನ್ನ ಪೊಲೀಸ್​ ತಂಡದಲ್ಲಿದ್ದ ಹೆಡ್​ ಕಾನ್ಸ್'​ಟೇಬಲ್​ ಗೋಪಾಲ್ ಸಿಂಗ್ ತನ್ನ ಗೆಳೆಯರ ಜೊತೆ ಅರೋಪಿ ಮನೆಗೆ ಹೋಗಿ ಅರೋಪಿಯಿಂದ ಚಿನ್ನಾಭರಣ, ಹಣ ಪಡೆದು ಅಜಯ್'​ನನ್ನು ಪಾರು ಮಾಡಿದ್ದಾರೆ. ಬಳಿಕ ತಮಗೇನು ಗೊತ್ತಿಲ್ಲ ರೀತಿ ಹೈಡ್ರಾಮಾ ಮಾಡಿ ವಾಪಸ್​ ಬಂದಿದ್ದಾರೆ. ಅನುಮಾನಗೊಂಡ ಜಂಬು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾನೆ. ಮತ್ತೆ ತನಿಖೆ ನಡೆಸಿದಾಗ ಹೆಡ್​ ಕಾನ್ಸ್​ಟೇಬಲ್​ ಕೃತ್ಯ ಬೆಳಕಿದೆ ಬಂದಿದೆ.

ಸಾಕ್ಷಿ ನಾಶ ಮಾಡಿದ ಹೆಡ್​ ಕಾನ್ಸ್​ಟೇಬಲ್​ ಗೋಪಾಲ್ ಸಿಂಗ್ ಹಾಗೂ ಆತನ ಗೆಳೆಯ ಸಾದಿಕ್ ರನ್ನು ಕೆಜಿಎಫ್ ರಾರ್ಬಟ್ ಸನ್ ಪೊಲೀಸರು ಬಂಧಿಸಿದ್ದಾರೆ. ವಂಚಕ ಅಜಯ್ ಕುಮಾರ್ ಹಾಗೂ ಆತನ ಕುಟುಂಬ ನಾಪತ್ತೆಯಾಗಿದೆ. ಪೊಲೀಸ್ ತಂಡ ಹುಡುಕಾಟ ಮುಂದುವರೆಸಿದೆ. ಒಟ್ಟಾರೆ ಆರೋಪಿಯಿಂದ ಹಣ ಪಡೆದು ವಂಚನೆಗೆ ನೆರವಾದ ಹೆಡ್​ಕಾನ್ಸ್​ಟೇಬಲ್​ ಗೋಪಾಲ್ ಸಿಂಗ್ ಈಗ ಕಂಬಿ ಹಿಂದೆ ಹೋಗಿದ್ದಾನೆ.