ಚಾಲಕ ಅಲ್ಲಾಭಕ್ಷ್, ಶೇಖರ್ ನಾಯ್ಕ ಬಂಧಿತರು.ಹಗರಿಬೊಮ್ಮನ ಹಳ್ಳಿಯ ಸಿಪಿಐ ಕಾಶೀನಾಥ್ ಹೆದ್ದಾರಿಯಲ್ಲಿ ವಾಹನಗಳ ಪರಿಶೀಲನೆ ಮಾಡುತ್ತಿರುವ ವೇಳೆ ಬಂಧಿಸಲಾಗಿದೆ.
ಬಳ್ಳಾರಿ(ಅ.13): ಕಳ್ಳರು ಜಾನುವಾರುಗಳನ್ನು ಕಳ್ಳತನ ಮಾಡಲು ಸಾಮಾನ್ಯವಾಗಿ ಲಾರಿ, ಟೆಂಪೋಗಳನ್ನ ಬಳಸೋದನ್ನು ಕೇಳಿರುತ್ತೇವೆ. ಆದರೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಅಂಬುಲೆನ್ಸ್'ನಲ್ಲಿ ಕುರಿಗಳ ಕಳ್ಳತನ ಮಾಡಲು ಯತ್ನಿಸಿ ಪೊಲೀಸರ ಅತಿಥಿಗಳಾಗಿದ್ದಾರೆ .
ಚಾಲಕ ಅಲ್ಲಾಭಕ್ಷ್, ಶೇಖರ್ ನಾಯ್ಕ ಬಂಧಿತರು.ಹಗರಿಬೊಮ್ಮನ ಹಳ್ಳಿಯ ಸಿಪಿಐ ಕಾಶೀನಾಥ್ ಹೆದ್ದಾರಿಯಲ್ಲಿ ವಾಹನಗಳ ಪರಿಶೀಲನೆ ಮಾಡುತ್ತಿರುವ ವೇಳೆ ಬಂಧಿಸಲಾಗಿದೆ. ಹಡಗಲಿ ಮತ್ತು ಬೊಮ್ಮನ'ಹಳ್ಳಿಯಲ್ಲಿ ಕುರಿ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ ಇನ್ನು ಇಬ್ಬರು ಭಾಗಿಯಾಗಿದ್ದು, ಇವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
( ಸಾಂದರ್ಭಿಕ ಚಿತ್ರ )
